ಕೇರಳದ ಅತ್ಯಂತ ಜನಪ್ರಿಯ ಶಿಲ್ಪಗಳಲ್ಲಿ ಯಕ್ಷಿ ಪ್ರತಿಮೆ ಒಂದಾಗಿದ್ದು ಈ ಪ್ರತಿಮೆ ಮಲಂಪುಳಾ ಗಾರ್ಡನ್ ನಲ್ಲಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಇದರ ಹಿನ್ನೆಲೆಯಲ್ಲಿ ಪರ್ವತ ಶ್ರೇಣಿ ಹಾಗೂ ಸಮೃದ್ಧ ಹಸಿರು ತೋಟಗಳನ್ನು ಕಾಣಬಹುದಾಗಿದೆ. ಈ ಪ್ರತಿಮೆಯನ್ನು ಕನಾಯ್ ಕುನ್ಹಿರಾಮನ್ ಎನ್ನುವ ಶಿಲ್ಪಿಗಳು 1969 ರಲ್ಲಿ ಕೆತ್ತನೆ ಮಾಡಿದರೆಂದು ಹೇಳಲಾಗುತ್ತದೆ. ಪ್ರತಿಮೆಯ ಬೃಹತ್ ಗಾತ್ರ ಹೊಂದಿದ್ದು ಒಂದೇ ಕಲ್ಲಿನಿಂದ ನಿರ್ಮಿಸಲಾಗಿದೆ. ಪ್ರತಿಮೆಯ ಹಿಂದಿನ ಸೃಜನಶೀಲತೆ ಗಮನಾರ್ಹವಾಗಿದ್ದು ವೀಕ್ಷಕ ಮಂತ್ರಮುಗ್ಧಗೊಳಿಸುತ್ತದೆ. ಇದು ಮಲಂಪುಳಾದಲ್ಲಿ ನೋಡಲೆಬೇಕಾದ ಸ್ಥಳಗಳಲ್ಲಿ ಒಂದಾಗಿದೆ.