ಶಾಂತಿ ಸ್ತೂಪವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲೇಹ್ ಜಿಲ್ಲೆಯಲ್ಲಿದೆ. ಚಂಗಸ್ಪಾ ಕೃಷಿ ಉಪನಗರದ ಮೇಲೆ ಇದು ನಿರ್ಮಾಣಗೊಂಡಿದೆ. ಜಪಾನಿನ "ಪೀಸ್ ಸೆಕ್ಟ್"ಬೌದ್ಧ ಧರ್ಮೀಯರು ತಂಡವು ಈ ಶಾಂತಿ ಸ್ತೂಪವನ್ನು ನಿರ್ಮಿಸಿದ್ದಾರೆ. ಸ್ತೂಪ ಅಥವಾ ಕಂಬವು ಬುದ್ಧನ ಜೀವನ ಸಾರವನ್ನು ಪಸರಿಸುವ ಕಾರ್ಯ ಮಾಡುತ್ತಿದೆ. 1983 ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಯಿತು. ದಲೈಲಾಮಾರ ಆದೇಶದ ಹಿನ್ನೆಲೆಯಲ್ಲಿ ಇದನ್ನು ನಿರ್ಮಿಸಲಾಯಿತು. ಬುದ್ಧನ ಕುರಿತು ಮಾಹಿತಿ ನೀಡುವ ಸಲುವಾಗಿ ಇದನ್ನು ನಿಲ್ಲಿಸಲಾಯಿತು. ಲೇಹ್ ಪಟ್ಟಣದಿಂದ ಇದು ಐದು ಕಿ.ಮೀ. ದೂರದಲ್ಲಿದೆ. ಲೇಹ್ ಪ್ಯಾಲೇಸ್ ಕಡೆ ಮುಖ ಮಾಡಿ ನಿಂತಿದೆ. ಕೋಟೆ ರಸ್ತೆಯಲ್ಲಿ ಸಾಗಿ ಇಲ್ಲಿಗೆ ತಲುಪಬಹುದು.
ಸ್ತೂಪ ನಿರ್ಮಾಣಕಾರ್ಯ ಪೂರ್ಣಗೊಂಡಿದ್ದು, 1991ರಲ್ಲಿ. ಇದನ್ನು 14 ನೇ ದಲೈಲಾಮಾ ತೇಂಜಿಂಗ್ ಗೈಯಿಸ್ಟ್ರೋ ಉದ್ಘಾಟಿಸಿದರು. ಜೀಪ್ ಅಥವಾ ಟ್ಯಾಕ್ಸಿ ಬಾಡಿಗೆ ಪಡೆದು ಪ್ರವಾಸಿಗರು ಇಲ್ಲಿಗೆ ಆರಾಮವಾಗಿ ಆಗಮಿಸಬಹುದು. ಟ್ರೆಕ್ಕಿಂಗ್ ಕೂಡ ಒಂದು ಆಯ್ಕೆ. ಸಾಹಸಪ್ರಿಯರು ಸಾಮಾನ್ಯವಾಗಿ ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.


Click it and Unblock the Notifications