ಅಭಿನಾಥ ಆಸ್ಥಾನವು ನೊನ್ಗರ್ಹಇದಲ್ಲಿದೆ. ಇದು ಬೆಟ್ಟಗಳ ಮೇಲಿರುವ ಪ್ರದೇಶ. ಸ್ಥಳೀಯ ಪುರಾಣಗಳು ಮತ್ತು ನಂಬಿಕೆಯ ಪ್ರಕಾರ ಅಭಿನಾಥ ಬಾಬಾ ರೋಗವಾಸಿ ಮಾಡುವ ವೈದ್ಯರಾಗಿದ್ದರು. ಈತ ತನ್ನ ಜೀವನ ಪೂರ್ತಿ ನೊನಗರ್ಹನನ ಜನರಿಗೆ ಔಷಧಿಯನ್ನು ನೀಡಿದ್ದರು. ಇವರಿಗೆ ಗೌರವ ಸೂಚಿಸುವ ಸಲುವಾಗಿ ಜನರು ದೇವಾಲಯವನ್ನು ಕಟ್ಟಿದರು.
ಮಾತೆ ಭಗವತಿಯ ಭಕ್ತರ ಮುಖ್ಯ ಯಾತ್ರಾ ಸ್ಥಳ ಭಗವತಿ ಆಸ್ಥಾನ. ಈ ಪ್ರದೇಶವು ಬೆಟ್ಟದ ಮೇಲಿದ್ದು ತನ್ನ ಪ್ರಕೃತಿ ಸೌಂದರ್ಯ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯಿಂದಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ನಾಗಪಂಚಮಿಯಂದು ಇಲ್ಲಿ ಉತ್ಸವ ನಡೆಯುತ್ತದೆ.
ಬರಹಿಯ ಗಂಗಾ ನದಿಯ ದಂಡೆಯಲ್ಲಿರುವ ಹೈಟೆಕ್ ನಗರ. ವ್ಯವಸಾಯ ಇಲ್ಲಿನ ಜನಗಳ ಮುಖ್ಯ ವೃತ್ತಿ. ಇವರು ಎಲ್ಲ ಬಗೆಯ ರಾಬಿ ಬೆಳೆಯನ್ನು ಬೆಳೆಯುತ್ತಾರೆ. ರಾಷ್ಟ್ರೀಯ ಹೆದ್ದಾರಿ 80, ದೆಹಲಿ-ಕೊಲ್ಕತ್ತಾ ಹೆದ್ದಾರಿ ಮತ್ತು ಹಳೆಯ ಗ್ರಾಂಡ್ ಟ್ರಂಕ್ ರಸ್ತೆಯು ನಗರವನ್ನು ಇತರ ನಗರಗಳು ಮತ್ತು ರಾಜ್ಯಗಳೊಂದಿಗೆ ಸೇರಿಸುತ್ತದೆ.
ಶ್ರಿಂಗಿ ರಿಷಿ ಕಶ್ಯಪರ ವಂಶದ ಸಂತ. ಲಕ್ಷ್ಮಣ ಘಾಟ್ನ ಸಮೀಪದಲ್ಲಿನ ಸರಯೂ ನದಿಯ ದಂಡೆಯಲ್ಲಿ ಶ್ರಿಂಗಿ ರಿಷಿಯ ಆಶ್ರಮವಿದೆ.
ರಜೌನವನ್ನು ಪ್ರವಾಸಿ ಹುಯೆನ್ ತ್ಸಾಂಗ್ನು ಬೌದ್ಧರಿಗೆ ಮುಖ್ಯ ಸ್ಥಳ ಮತ್ತು ಬೌದ್ಧ ಮಠಗಳಿಗೆ ತವರು ಭೂಮಿ ಎಂದು ವರ್ಣಿಸಿದ್ದಾನೆ. ಈ ನಗರವು ಪಾಲ್ಸರ ಕೊನೆಯ ದೊರೆ ಇಂದ್ರದಮನನ ರಾಜಧಾನಿಯಾಗಿತ್ತು. ರಜೌನದಲ್ಲಿನ ಪಾಳುಬಿದ್ದ ಸ್ಮಾರಕಗಳು ಇಲ್ಲಿನ ವೈಭವಯುತ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಕಪ್ಪುಶಿಲೆಯಲ್ಲಿನ ಶಿವಲಿಂಗವು...
ನೊನ್ಗಡ್ನ ಲಖಿಸಾರಿಯಿಂದ 10ಕಿಮೀ ದೂರದಲ್ಲಿದೆ. ಇದು ಕೂಡ ಉತ್ಖನನದ ಪ್ರದೇಶವಾಗಿದ್ದು ಪುರಾತನ ಭಾರತದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಇಲ್ಲಿ ಹಲವು ಮರಳುಶಿಲೆಗಳಿಂದಾದ ದೇವ ದೇವತೆಯರ ವಿಗ್ರಹಗಳು ಸಿಕ್ಕಿವೆ. ಇದು ನೊನ್ಗರ್ಹಮವು ಹಲವು ಕದನಗಳನ್ನು ಕಂಡಿರುವುದನ್ನು ಸೂಚಿಸುತ್ತದೆ.