ಪವನಗರ ಅಥವಾ ಪವಪುರಿಯನ್ನು ಭಗವಾನ್ ಮಹಾವೀರನ ನಿರ್ವಾಣ ಜಾಗವೆಂದು ಕರೆಯಲಾಗಿದೆ. ಇದು ಕುಶಿನಗರದಿಂದ 22 ಕಿ ಮೀ ದೂರದಲ್ಲಿ ಪೂರ್ವದಲ್ಲಿದೆ. ಇದು ಬೌದ್ಧ ಮತ್ತು ಜೈನ ಯಾತ್ರಿಕರ ಸ್ಥಳವಾಗಿದೆ. ಜೈನ ಆಧಾರದ ಪ್ರಕಾರ, ಜೈನರ ಕೊನೆಯ ಮತ್ತು 24 ನೇಯ ತೀರ್ಥಂಕರರಾದ ಮಹಾವೀರ ಇಲ್ಲಿ ತನ್ನ ದೇಹ ತ್ಯಜಿಸಿದನು ಮತ್ತು ಕ್ರಿ,ಪೂ 543 ರಲ್ಲಿ ನಿರ್ವಾಣ ಹೊಂದಿದರು. ಆ ಕಾರಣಕ್ಕಾಗಿ ಇಲ್ಲಿ ಈ ದೇವಾಲಯವನ್ನು ಸ್ಥಾಪಿಸಲಾಯಿತು. ಇದು ಭವ್ಯವಾದ ಮಾನಸ್ಥಂಭ ಮತ್ತು ನಾಲ್ಕು ಕಲಾತ್ಮಕವಾಗಿ ಕೆತ್ತಿದ ವಿಗ್ರಹಗಳನ್ನು ಹೊಂದಿದೆ.
ಬೌದ್ಧ ಸಾಹಿತ್ಯದ ಪ್ರಕಾರ, ಬುದ್ಧನು ಒಮ್ಮೆ ವೈಶಾಲಿಯಿಂದ ಕುಶಿ ನಗರಕ್ಕೆ ಹೋಗುವಾಗ ತನ್ನ ಅನುಯಾಯಿಯಾಗಿದ್ದ ಚುಂದ ಕಮ್ಮಾರ ಎಂಬುವವನಿಂದ ಇಲ್ಲಿಯೆ ಸುಕರಮದ್ದವ(ಅಣಬೆಯ ಆಹಾರ) ಸ್ವೀಕರಿಸಿದ್ದನಂತೆ. ಈ ನಗರ ಐತಿಹಾಸಿಕ ಸ್ಮಾರಕಗಳನ್ನು ಒಳಗೊಂಡಿದ್ದು ಸಾಕಷ್ಟು ಪ್ರವಾಸಿಗರು, ಜೈನ ಮತ್ತು ಬೌದ್ಧ ಯಾತ್ರಿಕರನ್ನು ಆಕರ್ಷಿಸುತ್ತದೆ. ಕಾರ್ತಿಕ ಪೂರ್ಣಿಮ ದಿನ ಜಗತ್ತಿನಾದ್ಯಂತ ಸಾಕಷ್ಟು ಜೈನ ಭಕ್ತರು ಇಲ್ಲಿ ಸೇರುತ್ತಾರೆ. ದೀಪಾವಳಿ ದಿನ ಮಹಾವೀರನ ಮೆರವಣಿಗೆಯನ್ನು ಮಾಡಲಾಗುತ್ತದೆ.


Click it and Unblock the Notifications