ಕುಬೇರನನ್ನು ಹಿಂದೂಗಳು ದುಡ್ಡಿನ ದೇವರಾಗಿ ಪೂಜಿಸುತ್ತಾರೆ. ಕುಬೇರನು ಅಗಾಧವಾದ ಸಂಪತ್ತನ್ನು ಹೊಂದಿದ್ದರೂ ಶಿವನ ಪರಮ ಭಕ್ತನಾಗಿದ್ದ. ತನ್ನ ಆಶ್ರಯದಾತ ಭಗವಾನ್ ಶಿವನಿಗೆ ಗೌರವ ಸೂಚಿಸಲು ಅವನು ಈ ಆಸ್ಥಾನವನ್ನು ನಿರ್ಮಿಸಿದ.
ಈ ದೇವಾಲಯವು ರದ್ರೌನಾ-ತುರ್ಕ್ಪಟ್ಟಿ ಮುಖ್ಯ ರಸ್ತೆಯಲ್ಲಿ ಕುಬೇರನಾಥ್ನ ಪದ್ರೌನಾದಿಂದ 9 ಕಿ.ಮೀ ಅಂತರದಲ್ಲಿ ನೆಲೆಸಿದೆ ಮತ್ತು ಕುಶಿನಗರದಿಂದ 21 ಕಿ.ಮೀ ಅಂತರದಲ್ಲಿದೆ. ಆದ್ದರಿಂದ ಕಸಿಯ - ತುರ್ಕ್ಪಟ್ಟಿ -ಪದ್ರೌನ ರಸ್ತೆ ಮಾರ್ಗದಲ್ಲಿ ಸುಲಭವಾಗಿ ಈ ದೇವಾಲಯವನ್ನು ತಲುಪಬಹುದು.
ನಂತರದ ದಿನಗಳಲ್ಲಿ ಪದ್ರೌನಾದ ರಾಜನು ಭಗವಾನ್ ಶಿವನ ದೇವಾಲಯವನ್ನು ನಿರ್ಮಿಸಿದನು. ವೈಶಾಖ ಮತ್ತು ಫಾಲ್ಗುಣ ಮಾಸದ 13 ನೆ ದಿನವಾದ ಶಿವರಾತ್ರಿಯನ್ನು ಆಚರಿಸಲು ಸೂಕ್ತ ದೇವಾಲಯ ಇದಾಯಿತು. ಎರಡೂ ತಿಂಗಳಿನಲ್ಲಿ ಈ ದೇವಾಲಯವನ್ನು ಶ್ರೇಯಸ್ಕರ ಎಂದು ಪರಿಗಣಿಸುತ್ತಾರೆ. ಫಾಲ್ಗುಣ ಮಾಸದಲ್ಲಿ ಒಂದು ವಾರ ಹಬ್ಬ ಆಚರಿಸಲಾಗುತ್ತದೆ ಮತ್ತು ವೈಶಾಖ ಮಾಸದಲ್ಲಿ ಒಂದು ತಿಂಗಳು ಹಬ್ಬವನ್ನು ಆಚರಿಸಲಾಗುತ್ತದೆ. ಇದು ಶಿವಾರಾತ್ರಿಯ ದಿನ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ ಆ ದಿನ ಶಿವನ ವಿಗ್ರಹದ ಮೇಲೆ ನೀರನ್ನು ಅಭಿಷೇಕ ಮಾಡಲು ಭಕ್ತರು ಕಾತುರರಾಗಿರುತ್ತಾರೆ.