ಚೋರಭರಿ ತಾಲ್ ಸಮುದ್ರ ಮಟ್ಟದಿಂದ 3900 ಮೀಟರ್ ಎತ್ತರದಲ್ಲಿದೆ. ಇದು ಚೋರಭರಿ ಬಮಕ್ ಹಿಮಾಚ್ಛಾದಿತ ಪ್ರದೇಶ(ಹಿಮನದಿ)ದ ತುತ್ತತುದಿಯಲ್ಲಿದೆ. ಇದು ಕೇದಾರನಾಥ ಹಾಗೂ ಕೀರ್ತಿ ಸ್ಥಂಭ ಬೆಟ್ಟದ ತಪ್ಪಲಿನಲ್ಲಿದೆ. ಹಿಮಾಲಯ ಪರ್ವತದ ಆಕರ್ಷಕ ನೋಟವನ್ನು ಒಳಗೊಂಡಿದೆ. ಈ ಕೆರೆಯು ಗಾಂಧಿ ಸರೋವರ ಅನ್ನುವ ಹೆಸರಿನಿಂದಲೂ ಜನಪ್ರಿಯವಾಗಿದೆ. ಈ ಕೆರೆಯಲ್ಲಿ ಮಹಾತ್ಮ ಗಾಂಧಿ ಅವರ ಚಿತಾಭಸ್ಮವನ್ನು ಅರ್ಪಣೆ ಮಾಡಿದ ನಂತರ ಈ ಹೆಸರು ಬಳಕೆಗೆ ಬಂದಿದೆ.
ಪುರಾಣದ ಪ್ರಕಾರ, ಮಹಾಭಾರತದಲ್ಲಿ ಬರುವ ಪಾಂಡವರ ಹಿರಿಯ ಸಹೋದರ ಯುದಿಷ್ಟಿರ, ಈ ಕೆರೆಯನ್ನು ನಿರ್ಮಿಸಿದ ಎಂದು ಹೇಳಲಾಗುತ್ತದೆ. ಇಲ್ಲಿಗೆ ಟ್ರೆಕ್ಕಿಂಗ್ ಮೂಲಕವೇ ತಲುಪಬೇಕು. ಕೇದಾರನಾಥ ಸೇತುವೆಯಿಂದ ಒಟ್ಟು ಮೂರು ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ತೆರಳುವ ಮಾರ್ಗದಲ್ಲಿ ಅರ್ಧ ಹಾದಿ ಅತ್ಯಂತ ಆರಾಮದಾಯಕವಾಗಿದೆ. ಅಲ್ಲದೇ ಮಾರ್ಗ ಮಧ್ಯೆ ಆಕರ್ಷಕ ಜಲಪಾತ ಕಣ್ಮನ ಸೆಳೆಯುತ್ತದೆ. ಈ ತಾಣಕ್ಕೆ ಭೇಟಿ ನೀಡುವವರಿಗೆ ನೀಡುವ ಸಲಹೆ ಎಂದರೆ ಬೆಳಗಿನ ಜಾವದಲ್ಲಿ ಇಲ್ಲಿಗೆ ಭೇಟಿ ನೀಡಬೇಕು. ಬದಲಾಗುವ ವಾತಾವರಣವನ್ನು ನಿಚ್ಚಳವಾಗಿ ಕಾಣಬಹುದು ಎನ್ನಲಾಗುತ್ತದೆ.