ತಿಮನಗರ್ ಕೋಟೆಯು ಕರೌಲಿಗೆ ಸನಿಹದಲ್ಲಿದ್ದು, ಮಸಾಲ್ಪುರ್ ನ ಉಪ-ತೆಹಸಿಲ್ ನಲ್ಲಿದೆ. ಇತಿಹಾಸಕಾರರ ಪ್ರಕಾರ, ಈ ಕೋಟೆಯನ್ನು ಕ್ರಿ.ಶ. 1100 ರಲ್ಲಿ ನಿರ್ಮಿಸಲಾಗಿದ್ದು; ಶೀಘ್ರದಲ್ಲಿ ಆಕ್ರಮಣಕ್ಕೊಳಗಾಗಿ ನಾಶ ಹೊಂದಿತು. ತದನಂತರ ಇದನ್ನು ಯದುವಂಶಿ ರಾಜನಾದ ವಿಜಯ್ ಪಾಲನ ವಂಶಕುಡಿಯಾದ ತಿಮನ್ ಪಾಲನು ಕ್ರಿ.ಶ. 1244 ರಲ್ಲಿ ಮರುನಿರ್ಮಿಸಿದನು.ಜನರ ನಂಬಿಕೆಗಳ ಪ್ರಕಾರ, ಈ ಕೋಟೆಯಲ್ಲಿರುವ ದೇವಸ್ಥಾನಗಳಲ್ಲಿ ಪುರಾತನ ಅಷ್ಟಧಾತುಗಳು, ಕಲ್ಲಿನ ವಿಗ್ರಹಗಳು ಮತ್ತು ಶಾಸನಗಳು ಮುಚ್ಚಿ ಹೋಗಿವೆ. ಈ ದೇವಸ್ಥಾನಗಳ ಮೇಲ್ಛಾವಣಿಗಳು ಮತ್ತು ಖಂಬಗಳಲ್ಲಿನ, ರೇಖಾಗಣಿತ ಹಾಗು ಹೂವಿನಾಕಾರದ ಕೆತ್ತನೆಗಳು ನೋಡುಗರನ್ನು ಬೆರುಗುಗೊಳಿಸುತ್ತದೆ. ಇದಲ್ಲದೆ ಹಲವು ದೇವ, ದೇವತೆಯರ ಸುಂದರವಾದ ಕೆತ್ತನೆ ಕೆಲಸಗಳನ್ನು ಇಲ್ಲಿ ಗಮನಿಸಬಹುದು.ಇಲ್ಲಿ ದೊರೆತಿರುವ ಹಲವು ದಾಖಲೆಗಳ ಪ್ರಕಾರ, ಈ ಕೋಟೆಯು ಕ್ರಿ.ಶ.1196 ಮತ್ತು1244 ರ ನಡುವೆ ಮಹಮ್ಮದ್ ಘೋರಿಯ ಸೈನ್ಯದ ಕೈವಶವಾಗಿತ್ತೆಂದು ದೃಢೀಕರಿಸಬಹುದು. ಇಲ್ಲಿರುವ ಸಾಗರ್ ಸರೋವರದ ಕೆಳಭಾಗದಲ್ಲಿ ಈಗಲೂ ಪಾರಸ್ ಮಣಿಯಿದೆ ಎಂದು ಇಲ್ಲಿನ ಜನರು ನಂಬುತ್ತಾರೆ.