ಮಯುರಭಂಜ್ ಜಿಲ್ಲೆಯ ಬರಿಪಾದದಲ್ಲಿರುವ ಜಗನ್ನಾಥ ಮಂದಿರವು ಕಾರಂಜಿಯಾದಿಂದ 133 ಕಿ.ಮೀ. ದೂರದಲ್ಲಿದೆ. ಇದನ್ನು ಹರಿಬಲದೇವ್ ಮಂದಿರವೆಂದೂ ಕರೆಯುತ್ತಾರೆ. ಮಂದಿರದೊಳಗೆ ಪತ್ತೆಯಾಗಿರುವ ಕೆಲವು ಶಿಲಾಶಾಸನಗಳಿಂದ ಮಂದಿರವನ್ನು 1497ರಲ್ಲಿ ಭನ್ಜ ಆಡಳಿತಗಾರರು ಸ್ಥಾಪಿಸಿದರೆಂಬ ಉಲ್ಲೇಖವಿದೆ.
ಜಂಬುಮಣ್ಣಿನ ಕಲ್ಲಿನಿಂದ ನಿರ್ಮಾಣವಾಗಿರುವ ಈ ಮಂದಿರದ ಆವರಣ ಗೋಡೆಯು ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಪ್ರತಿರೂಪದಂತೆ ಇದೆ. ಜಗನ್ನಾಥ ದೇವರ ಮೂರ್ತಿಯೊಂದಿಗೆ ಇಲ್ಲಿ 17 ಇತರ ದೇವರುಗಳ ಮೂರ್ತಿಗಳಿವೆ. ದೇವಾಲಯದ ಒಳಗಿರುವ ಸಣ್ಣ ಸಣ್ಣ ಕೊಠಡಿಗಳಲ್ಲಿ ಈ ಮೂರ್ತಿಗಳಿವೆ.
ರಥಯಾತ್ರೆಯನ್ನು ಇಲ್ಲಿ ತುಂಬಾ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲೇ ಸಮೀಪದಲ್ಲಿರುವ ರಾಧಾಮೋಹನ ಮಂದಿರವು ರಥಯಾತ್ರೆ ವೇಳೆ ಗುಂಡಿಚಾ ಮಂದಿರದ ಪಾತ್ರವನ್ನು ನಿರ್ವಹಿಸುತ್ತದೆ. ರಾಧಾಮೋಹನ ಮಂದಿರವು ತುಂಬಾ ಪುರಾತನವಾಗಿದೆ ಮತ್ತು ಇದರ ಗೋಡೆಗಳಲ್ಲಿ ಹಲವಾರು ವರ್ಣಚಿತ್ರಗಳನ್ನು ಈಗಲೂ ಕಾಣಬಹುದಾಗಿದೆ.


Click it and Unblock the Notifications