ಕಣ್ಣೂರಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಅತ್ಯಂತ ಜನಪ್ರಿಯ, ಸುಂದರ ತಾಣವಾಗಿರುವ ಪಾಯಂಬಾಲಂ ಬೀಚ್ 'ವೈಟ್ ಶೋರ್' ಎಂದೇ ಹೆಸರುವಾಸಿಯಾಗಿದೆ. ಕಣ್ಣೂರು ನಗರದಿಂದ ಕೇವಲ 2 ಕಿ.ಮೀ. ದೂರದಲ್ಲಿದ್ದು ರಸ್ತೆ ಮಾರ್ಗವಾಗಿ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ. ಬದುಕಿನ ದಿನನಿತ್ಯದ ಜಂಜಾಟದಿಂದ ಬಿಡುಗಡೆ ಹೊಂದಲು ಹಾಗೂ ಸೂರ್ಯಾಸ್ತಮಾನದ ಹೊಂಗಿರಣಗಳ ಅಂದವನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ತಾಯಿ ಮತ್ತು ಮಗುವಿನ ಸುಂದರ ಶಿಲ್ಪಕಲೆ ಪಾಯಂಬಾಲಂ ಬೀಚ್ ನ ಅತ್ಯಂತ ಆಕರ್ಷಣೆಯಾಗಿದೆ. ಮಲಾಂಪುಳಾದಲ್ಲಿ 'ಕನಯಿ ಕುಂಜಿರಮನ್' ಎಂಬ ಯಕ್ಷಿಣಿಯ ಶಿಲಾಕೃತಿ ಅತ್ಯಂತ ಆಕರ್ಷಕವಾಗಿದೆ, ಪ್ರಕೃತಿ ಸೌಂದರ್ಯದ ನಡುವೆ ಕೆತ್ತಲಾಗಿರುವ ಶಿಲಾಕೃತಿಗಳು ಇಲ್ಲಿ ಬಹಳ ಜನಪ್ರಿಯವಾಗಿವೆ.
ಈ ಸಮುದ್ರ ತೀರಕ್ಕೆ ಸೇರಿದಂತೆ ಸುಂದರವಾದ ಉದ್ಯಾನವನ ಇದೆ. ಇಲ್ಲಿ ಕುಳಿತು ಪ್ರೇಕ್ಷಕರು ಸಮುದ್ರದ ಅಂದ ಹಾಗೂ ಅಲೆಗಳ ನೀನಾದವನ್ನು ಕೇಳುತ್ತಾ ಆನಂದಿಸಬಹುದು. ಅತ್ಯಂತ ಜನಪ್ರಿಯ ವ್ಯಕ್ತಿಗಳಾದ ಸ್ವದೇಶಾಭಿಮಾನಿ ರಾಮಕೃಷ್ಣ ಪಿಳ್ಳೈ, ಪಂಬನ್ ಮಾಂದವನ್, ಎ.ಕೆ.ಗೋಪಾಲನ್ ಮತ್ತು ಕೆ.ಜಿ.ಮಾರರ್ ಅವರ ಅಂತ್ಯ ಸಂಸ್ಕಾರಗಳು ಈ ತೀರದ ಸಮೀಪದಲ್ಲೇ ನಡೆದಿದೆ. ಅತ್ಯಂತ ಸುರಕ್ಷಿತ ಹಾಗೂ ಶುದ್ಧತೆಯನ್ನು ಕಾಯ್ದುಕೊಂಡಿರುವುದೇ ಈ ಸಮುದ್ರ ತೀರದ ಮುಖ್ಯ ಲಕ್ಷಣವಾಗಿರುವುದರಿಂದ ಮಕ್ಕಳು ಮತ್ತು ಕುಟುಂಬದವರಿಗೆ ಹೇಳಿ ಮಾಡಿದ ಸ್ಥಳವಾಗಿದೆ.