ಧಾರ್ಮಿಕ ಸ್ಥಳಗಳು ಹಾಗೂ ದೇವಾಲಯಗಳಿಗೆ ಹೆಸರುವಾಸಿಯಾಗಿರುವ ಪಾಪಿನ್ನಿಸಿರಿ ಪ್ರದೇಶ ಕಣ್ಣೂರಿನಿಂದ ಸುಮಾರು10ಕಿ.ಮೀ.ದೂರದಲ್ಲಿದೆ. ಬಲಿಯಪಟ್ಟಿ ಎಂಬ ನದಿ ಹಾಗೂ ಅನೇಕ ಚಿಕ್ಕ ಪುಟ್ಟ ಬೆಟ್ಟಗಳಿಂದ ಆವರಿಸಲ್ಪಟ್ಟು ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡಿದೆ. ನದಿಯ ದಂಡೆಯಲ್ಲಿರುವ ಸುಂದರ ಸ್ಥಳ ಪಂಪುರಾತಿ ಹಾಗೂ ಕೇರಳಾದ ಕೈಲಾಸಂ ಎಂದೇ ಕರೆಯಲ್ಪಡುವ ವಾದೇಶ್ವರಂ ಬೆಟ್ಟಗಳು ಪಾಪಿನ್ನಿಸಿರಿಯ ಅತ್ಯಂತ ಆಕರ್ಷಕ ಸ್ಥಳಗಳಾಗಿವೆ.
ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಮುನ್ನೂ ಪೆಟ್ಟುಮ್ಮಾ ಪಲ್ಲಿ. ಇದನ್ನು ಕಾಟಿಲ್ ಪಲ್ಲಿ ಎಂದೂ ಕರೆಯುತ್ತಾರೆ. ಕಾಟಿಲ್ ಪಲ್ಲಿ ನಿರ್ಚಾ ಇಲ್ಲಿನ ಮಸೀದಿಯ ಪ್ರಮುಖ ಉತ್ಸವವಾಗಿದ್ದು ಈ ಸಂದರ್ಭದಲ್ಲಿ ಕೇರಳಾದ ವಿವಿಧ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಶಿವನ ಶ್ರೀ ವಾದೇಶ್ವರಂ ದೇವಸ್ಥಾನ ಹಿಂದೂಗಳಿಗಿರುವ ಮತ್ತೊಂದು ಆಕರ್ಷಕ ಧಾರ್ಮಿಕ ಸ್ಥಳವಾಗಿದೆ. ಇದು ಸುಂದರವಾದ ಬೆಟ್ಟದ ತುತ್ತತುದಿಯಲ್ಲಿದ್ದು 'ಉತ್ತರ ಮಲಬಾರಿನ ಕೈಲಾಸಂ' ಎಂದೇ ಹೆಸರುವಾಸಿಯಾಗಿದೆ.
ಆರೋನ್ ಚರ್ಚ್, ಮಂಕಡಾವು ಜುಮ್ಮಾ ಮಸೀದಿ ಮತ್ತು ಕೀಚಿರಿ ಪಾಲ್ಲೋಟು ಕಾವು ಇವುಗಳೂ ಕೂಡ ಪ್ರವಾಸಿಗರನ್ನು ಸೆಳೆಯುವ ಧಾರ್ಮಿಕ ತಾಣಗಳಾಗಿವೆ. ಹಾವು ಕಚ್ಚಿದವರಿಗೆ ಚಿಕಿತ್ಸೆ ನೀಡುವ ವಿಶೇಷ ಕೇಂದ್ರ 'ವಿಷ ಚಿಕಿತ್ಸಾ ಕೇಂದ್ರಂ', ಇದು ಪಾಪಿನ್ನಿಸಿರಿಯ ಅತ್ಯಂತ ಜನಪ್ರಿಯವಾದ ಸ್ಥಳವಾಗಿದೆ.