ಕಣ್ಣೂರಿನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪಾರಸಿನಿಕಡವು ಸ್ನೇಕ್ ಪಾರ್ಕ್ ಕೂಡ ಒಂದು. ವಿಶೇಷವಾದ ಜಾತಿಗೆ ಸೇರಿದ ಸರಿಸೃಪಗಳನ್ನು ಇಲ್ಲಿ ಇಡಲಾಗಿದ್ದು ಇಡೀ ದೇಶದಲ್ಲೇ ಇದು ವಿಶೇಷವಾದ ಗಮನವನ್ನು ಸೆಳೆದಿದೆ. ಭಾರತದಲ್ಲಿ ಸರಿಸೃಪಗಳ ರಕ್ಷಣೆಗಾಗಿ ಇರುವ ಏಕೈಕ ಸ್ನೇಕ್ ಪಾರ್ಕ್ ಇದಾಗಿದೆ.
ಕಣ್ಣೂರು ನಗರದಿಂದ 16 ಕಿ.ಮೀ. ದೂರದಲ್ಲಿರುವ ಪಾರಸಿನಿಕಡವು ನಗರದಲ್ಲೇ ಈ ಪಾರಸಿನಿಕಡವು ಸ್ನೇಕ್ ಪಾರ್ಕ್ ಅನ್ನು ನಿರ್ಮಿಸಲಾಗಿದೆ. ಇಲ್ಲಿನ ಪಾರಸಿನಿಕಡವು ಮುತ್ತಪ್ಪನ ದೇವಸ್ಥಾನ ಕೂಡ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಈ ಸ್ನೇಕ್ ಪಾರ್ಕ್ ನಲ್ಲಿ ಹಾವು ಕಚ್ಚಿದವರಿಗೆ ವಿಶೇಷ ಚಿಕಿತ್ಸೆ ನೀಡುವ ಮೆಡಿಕಲ್ ಇನ್ಸ್ಟಿಟ್ಯೂಟ್ ಇದೆ, ಅದನ್ನು 'ವಿಷ ಚಿಕಿತ್ಸಾ ಕೇಂದ್ರ' ಎಂದೂ ಕರೆಯುತ್ತಾರೆ. ಇದರ ಕೇಂದ್ರ ಕಛೇರಿ ಪಾಪಿನ್ನಿಸಿರಿ ಪಟ್ಟಣದಲ್ಲಿದೆ.
ಈ ಸ್ನೇಕ್ ಪಾರ್ಕ್ ನಲ್ಲಿ ಅತ್ಯಂತ ವಿಷಕಾರಿ ಸರ್ಪಗಳಾದ ಕಾಳಿಂಗ ಸರ್ಪ, ಕಿಂಗ್ ಕೋಬ್ರಾ, ಹಲವು ಬಗೆಯ ನಾಗರ ಹಾವು, ರುಸೆಲ್ಸ್ ವೈಪರ್, ಹೆಬ್ಬಾವುಗಳು, ಕ್ರೇಟ್ ಮತ್ತು ಪಿಟ್ ವೈಪರ್ ನಂತಹ ಮುಂತಾದ ಸರ್ಪಗಳಿದ್ದು ಇವುಗಳಿಂದ ಉತ್ತಮ ಗುಣಮಟ್ಟದ ವಿಷ ಸಂಗ್ರಹಣೆಯನ್ನೂ ಕೂಡ ಮಾಡಲಾಗುತ್ತದೆ. ಹಾವುಗಳು ಮಾತ್ರವಲ್ಲದೆ ಇತರ ಸರಿಸೃಪಗಳು ಹಾಗೂ ಪ್ರಾಣಿ ಪಕ್ಷಿಗಳೂ ಇಲ್ಲಿವೆ. ಸುಮಾರು 150 ಜಾತಿಯ ಸರಿಸೃಪಗಳು ಇಲ್ಲಿರುವುದು ವಿಶೇಷ. ಸರ್ಪಗಳ ಬಗ್ಗೆ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಲು ಅನೇಕ ನುರಿತ ತಜ್ಞರು ಇಲ್ಲಿದ್ದು ಈ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸುತ್ತಾರೆ.
ಭೇಟಿ ನೀಡುವ ಸಮಯ : ಬೆಳಗ್ಗೆ 9:30 ರಿಂದ ಸಂಜೆ 5:30ರವರೆಗೆ