ಏಕಾಂಬರೇಶ್ವರ ದೇವಾಲಯವು ಹಿಂದೂ ದೈವವಾದ ಶಿವನ ದೇವಾಲಯ . ಪ್ರತಿವರ್ಷವೂ ಸಾವಿರಾರು ಭಕ್ತರು ಅವನ ಆಶೀರ್ವಾದಕ್ಕಾಗಿ ಇಲ್ಲಿಗೆ ಬರುತ್ತಾರೆ. ಕ್ರಿ.ಶ.600 ಕ್ಕೂ ಮೊದಲೇ ಕಟ್ಟಲ್ಪಟ್ಟ ಈ ದೇವಾಲಯವು ಕಾಂಚೀಪುರಂನ ಉತ್ತರ ಭಾಗದಲ್ಲಿದೆ. ಇದು ಶಿವನ ಅತಿ ಪವಿತ್ರವಾದ ಐದು ದೇವಾಲಯಗಳಲ್ಲೊಂದಾಗಿದ್ದು ಪಂಚಭೂತಗಳಲ್ಲೊಂದಾದ ಪೃಥ್ವಿಯ ಪ್ರತೀಕವಾಗಿದೆ. ಇದು ಐದು 'ಪಂಚಭೂತಸ್ಥಳ'ಗಳಲ್ಲೊಂದಾಗಿದೆ. ದೇವಾಲಯದ ದುಂಡನೆಯ ಗೋಪುರವು 59 ಮೀಟರ್ ಎತ್ತರವಾಗಿದ್ದು ಭಾರತದಲ್ಲಿನ ಅಂತಹ ಎತ್ತರದ ನಿರ್ಮಾಣಗಳಲ್ಲೊಂದಾಗಿದೆ.
ಸ್ಥಳೀಯ ಐತಿಹ್ಯಗಳ ಪ್ರಕಾರ, ಶಿವನ ಹೆಂಡತಿ ಪಾರ್ವತೀದೇವಿಯು ಒಂದು ಮಾವಿನ ಮರದ ಕೆಳಗೆ ತಪಸ್ಸನ್ನು ಮಾಡಿದ್ದು ಅದು ಈಗಲೂ ದೇವಾಲಯದ ಆವರಣದೊಳಗೆ ಇದೆ.
ಈ ದೇವಾಲಯವನ್ನು ಪಲ್ಲವರಾಜರು ನಿರ್ಮಾಣಮಾಡಿದ್ದಾರೆಂದು ನಂಬಲಾಗಿದ್ದು ಆ ಕಾಲದ ಶ್ರೇಷ್ಠ ಕುಶಲಕಲೆಗಾರಿಕೆಗೆ ಉತ್ತಮ ಉದಾಹರಣವಾಗಿದೆ. ನಂತರ ದೇವಾಲಯವನ್ನು ಮರುನಿರ್ಮಿಸಲಾಯಿತು ಮತ್ತು ಇನ್ನಷ್ಟು ನಿರ್ಮಾಣವನ್ನು ಕಾಂಚೀಪುರಂನ ನಂತರದ ಅರಸರು ಮಾಡಿದರು.