ವಾಮನಮೂರ್ತಿ ದೇವಾಲಯವು ವಿಷ್ಣುವಿನ ಅವತಾರವಾದ ವಾಮನನಿಗಾಗಿ ನಿರ್ಮಿಸಲಾಗಿರುವ ಅತ್ಯಂತ ಅಪರೂಪದ ದೇವಾಲಯಗಳಲ್ಲಿ ಒಂದಾಗಿದೆ. ತ್ರಿಕ್ಕಕರದಲ್ಲಿರುವ ಈ ದೇವಾಲಯವನ್ನು ಸಾಂಪ್ರದಾಯಿಕವಾದ ಕೇರಳದ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ 10 ರಿಂದ 13 ನೇ ಶತಮಾನಕ್ಕೆ ಸೇರಿದ ಶಾಸನಗಳನ್ನು ನಾವು ಕಾಣಬಹುದು. ಈ ದೇವಾಲಯಕ್ಕೆ ಭೇಟಿಕೊಡಲು ಅತ್ಯುತ್ತಮ ಕಾಲವೆಂದರೆ ಓಣಂ ಹಬ್ಬ. ಏಕೆಂದರೆ ವಾಮನ ದೇವನು ಓಣಂ ಹಬ್ಬದ ಹಿಂದಿರುವ ದಂತಕತೆಗೆ ಸಂಬಂಧಿಸಿದ ದೇವರಾಗಿದ್ದಾನೆ. ಗಣಪತಿ ಮತ್ತು ಅನ್ನಪೂರ್ಣೇಶ್ವರಿ ದೇವಿಗಳು ಈ ದೇವಾಲಯದಲ್ಲಿ ಪೂಜಿಸಲ್ಪಡುವ ಇನ್ನಿತರ ದೇವರುಗಳಾಗಿದ್ದಾರೆ.


Click it and Unblock the Notifications