ರಾಮಕೃಷ್ಣ ಆಶ್ರಮವು ಬೇಲೂರ್ ಮಠದ ರಾಮಕೃಷ್ಣ ಮಠಕ್ಕೆ ಸೇರಿದ ಒಂದು ಶಾಖೆಯಾಗಿದೆ. ಇದು ಆದಿ ಶಂಕರರ ತವರಿನಲ್ಲಿ ನೆಲೆಗೊಂಡಿದೆ. ಇದೊಂದು ವಿಶಾಲವಾದ ಸಭಾಂಗಣವಾಗಿದ್ದು, ಪ್ರಾರ್ಥನೆಗಳಿಗೆ ಬಳಸಲ್ಪಡುತ್ತದೆ. ಇದು ಬೇಲೂರ್ ಮಠದಲ್ಲಿರುವಂತೆ ಶ್ರೀ ರಾಮಕೃಷ್ಣರ ದೇವಾಲಯವನ್ನು ಹೊಂದಿದೆ. ಈ ಆಶ್ರಮವು ಒಂದು ಶಾಲೆ , ಗ್ರಂಥಾಲಯ ಮತ್ತು ಒಂದು ದತ್ತಿ ಸಂಸ್ಥೆಯನ್ನು ನಡೆಸುತ್ತಿದೆ. ಇಲ್ಲಿನ ಶಾಲೆಯ ಹೆಸರು ಬ್ರಹ್ಮನಂದೋಯಂ ಎಂದಾಗಿದೆ. ರಾಮಕೃಷ್ಣ ಆಶ್ರಮವು ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡಿದೆ. ನೀವು ಇಲ್ಲಿಗೆ ಬಂದು ನಿಮ್ಮ ಮನಸ್ಸು ಮತ್ತು ಆತ್ಮಕ್ಕೆ ಸಂತೋಷ ಒದಗಿಸಬಹುದು. ಅಲ್ಲದೆ ಹತ್ತಿರದ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ಹೋಗಬಹುದು. ಕಾಲಡಿಗೆ ಬನ್ನಿ , ಇಲ್ಲಿ ನಿಮ್ಮ ಚಿಂತೆಗಳನ್ನು ದೂರಗೊಳಿಸಿ ಆಶ್ರಮದ ಪ್ರಶಾಂತತೆಯಲ್ಲಿ ಆರಾಮವಾಗಿ ಕಾಲ ಕಳೆಯಿರಿ.