ಭಾರತದಲ್ಲಿ ಇಂತಹ ನೀರಿನ ರಾಷ್ಟ್ರೀಯ ಉದ್ಯಾನ ಮತ್ತೊಂದಿಲ್ಲ. ಇದೊಂದು ಇಲ್ಲಿ ಬಂದಾಗ ತಪ್ಪದೇ ಭೇಟಿ ನೀಡಬೇಕಾದ ಸ್ಥಳವಾಗಿದೆ. ಇದು ಜಾಮ್ ನಗರ ಜಿಲ್ಲೆಯ ಕಛ್ ಖಾರಿಯ ದಕ್ಷಿಣ ಕಿನಾರೆಯಲ್ಲಿದೆ. ಈ ನೀರಿನ ರಾಷ್ಟ್ರೀಯ ಉದ್ಯಾನ ಭಾರತದ ಮೊತ್ತ ಮೊದಲ ನೀರಿನ ಉದ್ಯಾನವಾಗಿದೆ. 1982 ರಲ್ಲಿ ನಿರ್ಮಾಣವಾದ ಈ ಉದ್ಯಾನವನ್ನು ಗುಜರಾತಿನ ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದೆ. ಈ ಉದ್ಯಾನ ಸುಮಾರು 42 ದ್ವೀಪಗಳನ್ನು ಒಳಗೊಂಡಿದ್ದು ಇವುಗಳನ್ನು ಹೆಚ್ಚಿನವು ಬಂಡೆಕಲ್ಲುಗಳಿಂದ ಆವೃತವಾಗಿದೆ.
ಇದು ಸುಂದರವಾದ ಉದ್ಯಾನವಾಗಿದ್ದರೂ ಬಹಳವೇ ಜಾಗರೂಕತೆಯಿಂದ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಇಲ್ಲಿ ನೀರಿನಲ್ಲಿ ಬೆಳೆದ ಗಿಡಗಳನ್ನು ಮತ್ತು ಜಲಜೀವಿಗಳನ್ನು ನಾವು ಹತ್ತಿರದಿಂದ ಕಾಣಬಹುದಾಗಿದೆ. ಆದರೆ ಈ ವಿಶೇಷ ಉದ್ಯಾನ ಇಂದು ಒಂದು ಭೀತಿಯನ್ನು ಎದುರಿಸುತ್ತಿದೆ. ಇಲ್ಲಿರುವ ತೈಲ ಶುದ್ಧೀಕರಣ ಘಖಕಗಳು, ಸಿಮೆಂಟ್ ಉದ್ಯಮ ನಡೆಸುವ ಮರಳು ಮತ್ತು ಹವಳದ ದಂಡೆಗಳ ಗಣಿಗಾರಿಕೆ, ಯಂತ್ರಗಳನ್ನು ಬಳಸಿ ಮೀನುಗಾರಿಕೆ ನಡೆಸುವುದು ಹಾಗೂ ನೀರಿನಲ್ಲಿ ಹೆಚ್ಚಿದ ಪ್ರಕ್ಷುಬ್ಧತೆಯೇ ಇದಕ್ಕೆ ಕಾರಣ.


Click it and Unblock the Notifications