ಹರಪ್ಪನ್ ನಾಗರೀಕತೆಯ ಅವಶೇಷಗಳನ್ನು ಇಲ್ಲಿ ಕಾಣಬಹುದಾದ್ದರಿಂದ ಧೋಲಾವಿರ ಪ್ರಸಿದ್ಧಿ ಪಡೆದಿದೆ. ಸಿಂಧೂ ಕಣಿವೆ ನಾಗರೀಕತೆಯ ಮುಖ್ಯ ಪುರಾತತ್ವ ಸ್ಥಳಗಳಲ್ಲಿ ಒಂದಾದ ಧೋಲಾವಿರ ಕಚ್ ನ ರಣ್ ನಲ್ಲಿ ಖಾದಿರ್ ಬೆಟ್ ದ್ವೀಪದಲ್ಲಿ ಇದೆ. ಇದನ್ನು ಸ್ಥಳೀಯರು ಟಿಂಬ ಪ್ರಾಚೀನ ಮಹಾನಗರ ಕೊತಡ ಎಂದು ಕರೆಯುತ್ತಾರೆ. ಧೋಲಾವಿರ ದ ಮುಖ್ಯ ಆಕರ್ಷಣೆ ಹರಪ್ಪ ನಗರ ಈ ಸ್ಥಳದಲ್ಲಿ ಮೊದಲು ಇದ್ದದ್ದು. ಪುರಾತತ್ವ ಮಾದರಿಯಾಗಿ ಇಲ್ಲಿನ ನಾಗರೀಕತೆ, ಅವರ ಭಾಷೆ, ಸಂಸ್ಕೃತಿ ವಾಸ್ತುಶಿಲ್ಪ ಇವುಗಳನ್ನೆಲ್ಲ ಈ ನಗರವನ್ನು ಕಟ್ಟಲು ಬಳಸಿಕೊಂಡರು.
ಧೋಲಾವಿರ ಯಾವಾಗಲು ಇತಿಹಾಸಕಾರರಿಗೆ ಒಂದು ಪ್ರಮುಖ ಆವಿಷ್ಕಾರಿಯಾಗಿಯೇ ಉಳಿದಿದೆ.ಈ ಪಟ್ಟಣವನ್ನು ಜ್ಯಾಮಿತಿಯ ಆಕಾರದಲ್ಲಿ ಪೂರ್ವ ಯೋಜಿತ ರೀತಿಯಲ್ಲಿ 3 ವಿಭಾಗವಾಗಿ ಕೋಟೆ, ಮಧ್ಯಮ ಪಟ್ಟಣ ಮತ್ತು ಕೆಳ ಪಟ್ಟಣವಾಗಿ ಕಟ್ಟಲಾಯಿತು. ನಗರದ ಮಧ್ಯದಲ್ಲಿ ಇರುವ ಕೋಟೆ ಈ ನಗರಕ್ಕೊಂದು ಉತ್ತೇಜನ ಎನ್ನಲಾಗುತ್ತದೆ. ಈ ಹರಪ್ಪನ್ ನಗರದ ವೈಶಿಷ್ಟತೆ ಎಂದರೆ ಉಳಿದ ನಗರಗಳನ್ನುಇಟ್ಟಿಗೆಯಿಂದ ಮಾಡಲಾದರೆ ಈ ನಗರವನ್ನು ಕಲ್ಲಿನಿಂದ ಕಟ್ಟಲಾಗಿದೆ.
ಇನ್ನೊಂದು ಮುಖ್ಯ ವಿಷಯವೆಂದರೆ ಇವರು ಮಾಡಿರುವ ಅನೇಕ ಜಲಾಶಯಗಳ ನೀರಿನ ಸಂರಕ್ಷಣಾ ವ್ಯವಸ್ಥೆ. ಅನೇಕ ಕಲಾಕೃತಿಗಳಾದ ಆಭರಣಗಳು, ಹಡಗುಗಳು, ಸೀಲುಗಳು ಮತ್ತು ಚಿನ್ನ, ಬೆಳ್ಳಿ ಮತ್ತು ಟೆರಾಕೋಟಾ ಪಾತ್ರೆಗಳನ್ನು, ಮೆಸೊಪೊಟೆಮಿಯಾದ ಮೂಲದ ಕೆಲವು ವಸ್ತುಗಳನ್ನು ಈ ಸ್ಥಳದಿಂದ ಉತ್ಖನನ ಮಾಡಲಾಗಿತ್ತು. ರಸ್ತೆ ಮೂಲಕ ಸುಲಭವಾಗಿ ತಲುಪಬಹುದಾದ ಮತ್ತು ಗಾಂಧಿಧಾಮ ವಿಮಾನ ನಿಲ್ದಾಣಕ್ಕೆ ಸಂಪರ್ಕ ಹೊಂದಿರುವುದರಿಂದ ಮತ್ತು ಸಮಖ್ಯಾಲಿ ರೈಲ್ವೇ ನಿಲ್ದಾಣಕ್ಕೆ ಸುಲಭ ಸಂಪರ್ಕ ಹೊಂದಿರುವುದರಿಂದ ಧೋಲಾವಿರ ಭೇಟಿ ನೀಡಲು ಆಸಕ್ತಿದಾಯಕ ಸ್ಥಳವಾಗಿದೆ.
ಹವಾಮಾನ
ಧೋಲಾವಿರದಲ್ಲಿ ಹವಾಮಾನ 3 ಕಾಲಗಳಲ್ಲೂ ಅಸಾಮಾನ್ಯವಾಗಿರುತ್ತದೆ.ಬೇಸಿಗೆಯಲ್ಲಿ ಅತಿ ಹೆಚ್ಚು ಬಿಸಿಲು ಮತ್ತು ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಿಂದ ಕೂಡಿದ್ದು,ಚಳಿಗಾಲದಲ್ಲಿ ತಂಪಾಗಿರುತ್ತದೆ.