ಹುಬ್ಬಳ್ಳಿಗೆ ತೆರಳಿದ ಪ್ರವಾಸಿಗರಿಗೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾದ ಗಾಯತ್ರಿ ತಪೋವನದ ಭೇಟಿಗೆ 'ಶಿಫಾರಸ್ಸು' ಮಾಡಲಾಗಿದೆ. ಆರಂಭದಲ್ಲಿ, ಈ ಸ್ಥಳವನ್ನು ನವಕಲ್ಯಾಣ ಮಠ ಎಂದು ಕರೆಯುತ್ತಿದ್ದು ನಂತರ ತಪೋವನ ಎಂದು ಬದಲಾಯಿತು. ಇದನ್ನು ಶ್ರೀ ಕುಮಾರ್ ಸ್ವಾಮಿಜೀಯವರು ಸ್ಥಾಪಿಸಿದ್ದು ಪ್ರಸಿದ್ದ ಧರ್ಮೋಪದೇಶಕರಾಗಿದ್ದ ಅವರಿಗೆ ದೇಶದ ವಿವಿಧ ಪ್ರದೇಶಗಳ ಅನುಯಾಯಿಗಳಿರುವರು. ವಿವಿಧ ಸಮುದಾಯಗಳ ಅವರ ಅನುಯಾಯಿಗಳು ಅವರ ಭಾಷಣ ಕೇಳಲು ಸಂಧಿಸುತ್ತಿದ್ದರು. ಕುಮಾರ ಸ್ವಾಮಿಜೀಯವರ ಶಿಷ್ಯರು ಅವರ ಸಾವಿನ ನಂತರವೂ ಈ ಪರಂಪರೆಯನ್ನು ಉಳಿಸಿಕೊಂಡಿದ್ದಾರೆ.