ಸೋಮೇಶ್ವರ್ ನಾಥ್ ಮಹಾದೇವ್ ಮಂದಿರ ಏರಜ್ ನಲ್ಲಿರುವ ಒಂದು ಪುರಾತನವಾದ ಮಂದಿರವಾಗಿದೆ. ಇಲ್ಲಿ ಶಿವದೇವರನ್ನು ಪೂಜಿಸಲಾಗುತ್ತದೆ. ಕೇವಲ ಭಾರತದಿಂದ ಮಾತ್ರವಲ್ಲದೇ ನೇಪಾಳದಿಂದಲೂ ಇಲ್ಲಿಗೆ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಶ್ರಾವಣಿ ಮೇಳ ಎಂಬ ಹೆಸರಿನ ಮೇಳ ನಡೆಯುತ್ತಿದ್ದು ಬಹಳ ಪ್ರಸಿದ್ಧವಾಗಿದೆ. ಈ ಮೇಳವು ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ನಡೆಯುತ್ತದೆ. ಕೇವಲ ಈ ದೇವಾಲಯವಲ್ಲದೇ ಇನ್ನೂ ಹಲವು ದೇವಾಲಯಗಳು ಈ ಪ್ರದೇಶದಲ್ಲಿ ಇವೆ. ಇದೇ ಕಾರಣಕ್ಕಾಗಿ ಏರಜ್ ಜಿಲ್ಲೆಯನ್ನು ಪ್ರಸಿದ್ಧ ಜಿಲ್ಲೆ ಎಂದು ಕರೆಯಲಾಗುತ್ತದೆ.