ಜಾರ್ಖಂಡನ ಪ್ರಸಿದ್ಧ ಯಾತ್ರಾಸ್ಥಳ. ಇದು ಸರೈಹತ್ ಬ್ಲಾಕ್ನಲ್ಲಿದೆ. ಮುಖ್ಯ ಪಟ್ಟಣದಿಂದ 60 ಕಿಮೀ ದೂರದಲ್ಲಿದೆ. ಇಲ್ಲಿನ ಶಿವನ ದೇವಾಲಯಕ್ಕೆ ನಿತ್ಯವೂ ಭಕ್ತಾದಿಗಳ ಮಹಾಪೂರವೇ ಹರಿದು ಬರುತ್ತದೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಎಲ್ಲ ಭಾಗಗಳಿಂದ ಭಕ್ತಾದಿಗಳು ಶಿವನಿಗೆ ಪೂಜೆ ಸಲ್ಲಿಸಲು ಬರುತ್ತಾರೆ. ಇದು ಶಿವನಿಗೆ ವಿಶೇಷವಾದ ಹಬ್ಬ. ಗಂಗಾಭಿಷೇಕವನ್ನು ಪ್ರಾರ್ಥನೆ ಮತ್ತು ಮಂತ್ರಗಳೊಂದಿಗೆ ಬಾಬಾ ಸುಮೇಶ್ವರನಾಥನನ್ನು ಪೂಜಿಸಲಾಗುತ್ತದೆ.


Click it and Unblock the Notifications