ದುಮ್ಕಾದ ಅತ್ಯಂತ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಇದು ಕೂಡ ಒಂದು. ಹಿಂದೂಗಳ ಪವಿತ್ರಯಾತ್ರಾಸ್ಥಳ. ಶ್ರಾವಣ ಮೇಳ ಅಂದರೆ ಜುಲೈ ಮತ್ತು ಆಗಸ್ಟ್ ನಡುವಿನಲ್ಲಿ ನಡೆಯುವ ಉತ್ಸವಕ್ಕೆ ದೇಶದ ಎಲ್ಲ ಭಾಗಗಳಿಂದ ಭಕ್ತಾದಿಗಳು ಬರುತ್ತಾರೆ. ವಿದೇಶಿ ಪ್ರವಾಸಿಗರನ್ನು ಈ ಸಮಯದಲ್ಲಿ ಕಾಣಬಹುದು. ಗಂಗೆಯ ಪವಿತ್ರ ನೀರನ್ನು ವಿಗ್ರಹಕ್ಕೆ ಅಭಿಷೇಕ ಮಾಡಲಾಗುತ್ತದೆ. ಭಕ್ತಾದಿಗಳು ಖಾವಿ ಬಣ್ಣದ ವಸ್ತ್ರಗಳನ್ನು ತೊಟ್ಟಿರುತ್ತಾರೆ.
ಈ ಭಕ್ತಾದಿಗಳು ದಿಯೋಘರದ ವೈದ್ಯನಾಥ ಜ್ಯೋತಿರ್ಲಿಂಗವನ್ನು ಸಂದರ್ಶಿಸುತ್ತಾರೆ. ವಿವಾಹ ಪಂಚಮಿ ಅಥವ ರಾಮ ಜಾನಕಿ ವಿವಾಹ ಉತ್ಸವವು ಇಲ್ಲಿ ವರ್ಷದ ಕೊನೆಯಲ್ಲಿ ನಡೆಯುತ್ತದೆ. ಇದನ್ನು ಬಾಬಾ ಬಸುಕಿನಾಥರು ಆರಂಭಿಸಿದರು. “ಪಲ್ಲಕ್ಕಿ ಉತ್ಸವ”ವು ಈ ಉತ್ಸವದ ಒಂದು ಭಾಗ. ದುಮ್ಕಾ-ದಿಯೋಘರ್ ಹೆದ್ದಾರಿಗೆ ಸಮೀಪದಲ್ಲಿರುವುದರಿಂದ ಜಸಿದ್ಹಿ ದುಮ್ಕಾ ರೈಲ್ವೇಗೆ ಹತ್ತಿರದಲ್ಲಿದೆ. ಬಸುಕಿನಾಥ್ ಮತ್ತು ಜಂತಾರ ರೈಲ್ವೇ ನಿಲ್ದಾಣಗಳು ಇಲ್ಲಿಗೆ ಹತ್ತಿರವಾದುದು. ರಾಂಚಿ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ.