ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹಾರೂರ್ ಬಳಿ ಇರುವ ತೀರ್ಥಮಲೈ ಒಂದು ಸುಪ್ರಸಿದ್ಧ ತೀರ್ಥಕ್ಷೇತ್ರ. ಇಲ್ಲಿನ ಕಡಿದಾದ ಗುಡ್ಡದ ಇಳಿಜಾರಿನಲ್ಲಿ ಐದು ಚಿಲುಮೆಗಳಿವೆ. ಈ ದೇವಸ್ಥಾನದ ಹೆಸರು ಬಂದದ್ದೇ ಇದರಲ್ಲಿನ ಒಂದು ಚಿಲುಮೆಯ ಹೆಸರಿನಿಂದ. ತೀರ್ಥಗಿರೀಶ್ವರ ಎಂದೂ ಕರೆಯಲ್ಪಡುವ ಶಿವ ದೇವರೇ ಇಲ್ಲಿ ಪೂಜಿಸಲ್ಪಡುವುದು.
ಇಲ್ಲಿ ತೀರ್ಥಸ್ನಾನ ಮಾಡಿದವರ ಪಾಪಗಳೆಲ್ಲವೂ ಕಳೆಯುವುದು ಎಂಬ ನಂಬಿಕೆಯೂ ಇದೆ. ಹಿಂದೂ ಪುರಾಣದ ಪ್ರಕಾರ, ಲಂಕೆಯಲ್ಲಿನ ಸಾವಿರಾರು ಅಸುರರನ್ನು ಕೊಂದ ಪಾಪವನ್ನು ಕಳೆಯಲು ಶ್ರೀರಾಮನು ಶಿವನನ್ನು ಇಲ್ಲೇ ಆರಾಧಿಸಿದ್ದರು ಎನ್ನಲಾಗುತ್ತದೆ. ಈ ಕ್ಷೇತ್ರಕ್ಕೆ ಭೇಟಿ ನೀಡಲು ರಾಜ್ಯ ಸಾರಿಗೆ ನಿಗಮಿತ ಬಸ್ ಗಳ ಸೌಲಭ್ಯವಿದೆ.


Click it and Unblock the Notifications