ಪ್ರವಾಸಿಗರಿಗೆ ಕಾಲಾವಕಾಶವಿದ್ದರೆ ಇಲ್ಲಿನ ಬೆಟ್ಟದ ಬುಡದಲ್ಲಿರುವ ನಮದ ಚಿಲುಮೆಗೆ ಭೇಟಿಕೊಡಬಹುದು. ನಮದ ಚಿಲುಮೆಯು ಜಯಮಂಗಲಿ ನದಿಯ ಮೂಲವೆಂದು ಪರಿಗಣಿಸಲ್ಪಟ್ಟಿದೆ. ಪ್ರಸಿದ್ಧ ಜನಪದ ಕಥೆಯೊಂದರ ಪ್ರಕಾರ ಶ್ರೀ ರಾಮನು ಲಂಕೆಗೆ ಹೋಗುವಾಗ ಈ ಸ್ಥಳದಲ್ಲಿ ನೆಲೆನಿಂತನಂತೆ. ರಾಮನು ತನ್ನ ಹಣೆಗೆ ’ನಾಮ’ ಇಡಲು ನೀರಿಗಾಗಿ ಹುಡುಕಾಡಿದನಂತೆ. ನೀರು ಎಲ್ಲಿ ಸಿಗದಿದ್ದಾಗ ತನ್ನ ಬಿಲ್ಲನ್ನು ತೆಗೆದು ಈ ಸ್ಥಳದಲ್ಲಿ ಬಾಣ ಬಿಟ್ಟಾಗ, ಇಲ್ಲಿನ ನೀರಿನ ಚಿಲುಮೆ ಹುಟ್ಟಿತಂತೆ. ಆದ್ದರಿಂದ ಇದನ್ನು ನಾಮದ ಚಿಲುಮೆ ಅಂದರೆ ರಾಮ ಚಿಲುಮೆ ಎಂದು ಕರೆಯುತ್ತಾರೆ. ಪ್ರವಾಸಿಗರು ಈ ಚಿಲುಮೆಯ ಬಳಿಯಲ್ಲಿ ಶ್ರೀ ರಾಮನ ಪಾದದ ಹೆಜ್ಜೆಗುರುತುಗಳನ್ನು ಕಾಣಬಹುದು.ನಾಮದ ಚಿಲುಮೆಯ ಎದುರಿಗೆ 1931ರಲ್ಲಿ ನಿರ್ಮಿಸಲಾದ ಒಂದು ಅತಿಥಿಗೃಹವಿದೆ. ಪ್ರಸಿದ್ಧ ಪಕ್ಷಿತಙ್ಞರಾದ ಸಲೀಂ ಅಲಿಯವರು 1938ರಲ್ಲಿ ತಮ್ಮ ಸಂಶೋಧನೆಯ ಸಲುವಾಗಿ ಇಲ್ಲಿ ಕೆಲ ಕಾಲ ತಂಗಿದ್ದರು.


Click it and Unblock the Notifications