ರಜಪೂತ ರಾಜ ಮಹಾರಾಣ ಕುಂಭ, ತನ್ನ ರಾಜವೈಭೋಗ ಮೆರೆದ ಸ್ಥಳ ರಾಣಾ ಕುಂಭ ಅರಮನೆ. ಈ ಸುಂದರವಾದ ಅರಮನೆಯು 15 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಭಾರತದಲ್ಲೇ ಇದು ಅತ್ಯಂತ ಉತ್ತಮ ರಚನೆ ಎಂದು ಪರಿಗಣಿಸಲ್ಪಟ್ಟಿದೆ. ಇದು ರಜಪೂತ ಶೈಲಿಯ ವಾಸ್ತುಶಿಲ್ಪವಾಗಿದ್ದು ಪ್ರವಾಸಿಗರಲ್ಲಿ ತುಂಬಾ ಪ್ರಸಿದ್ಧವಾಗಿದೆ. ಈ ಅರಮನೆಗೆ ಗುಹೆಗಳಿವೆ ಎಂದು ನಂಬಲಾಗಿದೆ. ಇದರ ನೆಲ ಅಂತಸ್ತಿನಲ್ಲಿ ರಾಣಿ ಪದ್ಮಿನಿ ಮತ್ತು ಇತರ ಮಹಿಳೆಯರು ಜೌಹರ್ ಮಾಡಿದ್ದಾರೆ ಎಂದು ಹೇಳಲಾಗಿದೆ (ಜೌಹಾರ್ ಎಂದರೆ ಶತ್ರುಗಳ ಕೈಗೆ ಸಿಕ್ಕಿಬಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವುದು). ಅರಮನೆಯ ಸಮೀಪದಲ್ಲೇ ಪುರಾತನ ದೇವಸ್ಥಾನವೊಂದಿದೆ. ಇದು ಶಿವನಿಗೆ ಅರ್ಪಿತವಾದದ್ದು. ಪ್ರತಿ ದಿನವೂ ಬೆಳಕು ಮತ್ತು ಧ್ವನಿಯ ಪ್ರದರ್ಶನವನ್ನು ಪ್ರವಾಸಿಗರ ಆಕರ್ಷಣೆಗೆಂದು ಈ ಅರಮನೆಯಲ್ಲಿ ಆಯೋಜಿಸಲಾಗುತ್ತದೆ.


Click it and Unblock the Notifications