ಗೋಮುಖ ಕುಂಡವು ಚಿತ್ತೋರಗಢ ಕೋಟೆಯ ಪಶ್ಚಿಮ ಭಾಗದಲ್ಲಿರುವ ಪ್ರಮುಖ ಪವಿತ್ರ ಕೆರೆ. ಗೋಮುಖ ಎಂದರೆ ಗೋವಿನ ಮುಖ ಎಂದರ್ಥ. ಕಲ್ಲಿನ ಒಂದು ರಂಧ್ರದಿಂದ ನೀರು ಹರಿದು ಕೆರೆಗೆ ಬೀಳುತ್ತದೆ. ಪ್ರವಾಸಿಗರು ಈ ಕೆರೆಯಲ್ಲಿನ ಮೀನುಗಳಿಗೆ ಆಹಾರವನ್ನು ಹಾಕುತ್ತಾರೆ.ರಾಣಿ ಬಿಂದಾರ್ ನಾಲೆಯು ಕೆರೆಯ ಸಮೀಪ ಇದೆ. ಇದು ಪ್ರಮುಖ ಆಕರ್ಷಕ ಪ್ರವಾಸಿ ತಾಣ. ಐತಿಹ್ಯದ ಪ್ರಕಾರ ಈ ನಾಲೆಗೆ ನೆಲಮಾಳಿಗೆಯಿದೆ. ಇಲ್ಲಿ ಚಿತ್ತೋರಗಢದ ರಾಣಿ ಪದ್ಮಿನಿಯು “ಜೌಹರ್” ನಡೆಸಿದಳು ಎಂದು ಹೇಳಲಾಗುತ್ತದೆ.