ಸಮಯದ ಅನುಕೂಲವಿದ್ದರೆ ಪ್ರಯಾಣಿಕರು ಭದ್ರಾ ವನ್ಯಜೀವಿ ಅಭಯಾರಣ್ಯದ ವಿಭಾಗವೆಂದು ಪರಿಗಣಿಸಲಾಗುವ ಮುತ್ತೊಡಿ ಅರಣ್ಯ ಶಿಬಿರಕ್ಕೆ ಭೇಟಿ ನೀಡಬಹುದು. ಈ ಪ್ರದೇಶವು ಚಿಕ್ಕಮಗಳೂರು ಪಟ್ಟಣದಿಂದ 32 ಕಿಮೀ ದೂರದಲ್ಲಿ ನೆಲೆಸಿದೆ. ತನಿಗೆಬೈಲು, ಲಕ್ಕವಳ್ಳಿ ಮತ್ತು ಹೆಬ್ಬೀ ಇವು ಭದ್ರಾ ವನ್ಯಜೀವಿ ಅಭಯಾರಣ್ಯದ ಇತರ ಭಾಗಗಳು. ಮುತ್ತೊಡಿ ಅರಣ್ಯ ಶಿಬಿರಕ್ಕೆ ತಲುಪಿದ ಮೇಲೆ, ಪ್ರವಾಸಿಗರಿಗೆ ಹುಲಿಗಳು, ಸಾಂಬಾರ, ಆನೆಗಳಂತಹ ವಿಭಿನ್ನ ಜಾತಿಯ ಪ್ರಾಣಿಗಳನ್ನು ವೀಕ್ಷಿಸುವ ಅವಕಾಶ ಲಭಿಸುತ್ತದೆ. ಮಚ್ಚೆಯುಳ್ಳ ಜಿಂಕೆಗಳು ಮತ್ತು ಗೌರ್ಗಳು ಅವುಗಳಲ್ಲಿ ಕೆಲವು, ವಿವಿಧ ಜಾತಿಗಳ ಪಕ್ಷಿಗಳು ಸಹ ಮುತ್ತೊಡಿ ಅರಣ್ಯ ಶಿಬಿರದ ಭೇಟಿಗರಿಗೆ ಕಾಣಸಿಗುತ್ತವೆ. ಅರಣ್ಯ ಇಲಾಖೆಯಿಂದ ಆಯೋಜಿಸಲಾಗುವ ಪ್ರಕೃತಿ ಶಿಬಿರದಲ್ಲಿ ಪ್ರವಾಸಿಗರು ಭಾಗವಹಿಸಬಹುದು. ರಾತ್ರಿ ಉಳಿಯಲು ಬಯಸುವ ಪ್ರವಾಸಿಗರಿಗೆ ಗುಡಾರಗಳು ಮತ್ತು ಮರದ ಕುಟೀರಗಳು ಲಭ್ಯವಿವೆ.