ಚಿಕ್ಕಮಗಳೂರು ಪ್ರವಾಸದ ವೇಳೆ ಪಟ್ಟಣದಿಂದ 20 ಕಿಮೀ ದೂರದಲ್ಲಿರುವ ಅಯ್ಯನಕೆರೆ ಸರೋವರಕ್ಕೂ ಭೇಟಿ ನೀಡಬಹುದಾಗಿದೆ. ಈ ಸರೋವರವು ಪ್ರಶಾಂತ ಮತ್ತು ಸುಂದರ ಪರಿಸರದ ಮಲೆನಾಡು ಪ್ರದೇಶದಲ್ಲಿದೆ ಮತ್ತು ಇದು ಕರ್ನಾಟಕ ಎರಡನೇ ದೊಡ್ಡ ಕೆರೆಯಾಗಿದೆ. ಇದನ್ನು ಈ ಪ್ರದೇಶದ ಫಲವತ್ತತೆ ಕಾಯ್ದುಕೊಳ್ಳಲು 12 ನೇ ಶತಮಾನದಲ್ಲಿ ಸೃಷ್ಟಿಸಲಾಗಿತ್ತು.
ಜಲಾಶಯದ ಸನಿಹದಲ್ಲೇ ಇರುವ ಪಿರಮಿಡ್ ಆಕಾರದ ಶಿಖರವು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ. ಗಮ್ಯಸ್ಥಾನ ತಲುಪಿದ ಪ್ರವಾಸಿಗರು ಸೂರ್ಯೋದಯ ಮತ್ತು ಸೂರ್ಯಾಸ್ತದ ಸುಂದರ ದೃಶ್ಯಗಳನ್ನು ವೀಕ್ಷಿಸಲು ಅವಕಾಶ ಪಡೆಯುವರು.
ಕ್ಯಾಂಪಿಂಗ್ ಮತ್ತು ಮೀನುಗಾರಿಕೆಯಂತಹ ಮನರಂಜನಾ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಈ ಪ್ರದೇಶವು ಒಂದು ಆದರ್ಶಪ್ರಾಯವಾದ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಈ ಸ್ಥಳಕ್ಕೆ ಭೇಟಿ ನೀಡುವ ಯೋಜನೆಯಲ್ಲಿರುವ ಪ್ರವಾಸಿಗರು ಹತ್ತಿರದ ಶಕುನಿ ರಂಗನಾಥ ದೇವಾಲಯವನ್ನು ನೋಡಬಹುದು. ಅಯ್ಯನಕೆರೆ ಸರೋವರವನ್ನು ಹತ್ತಿರದ ಪ್ರದೇಶಗಳಲ್ಲಿನ ರೈತರು ನೀರಾವರಿ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಾರೆ. ಅಂಕಿ ಅಂಶಗಳ ಪ್ರಕಾರ, ಈ ಸರೋವರವು 21.560 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ.