ಚೌಕೋರಿಯ ಬೇರಿನಾಗ್ ಗ್ರಾಮದಲ್ಲಿರುವ ನಾಗಮಂದಿರ ಇಲ್ಲಿನ ಪ್ರಮುಖ ಶ್ರದ್ಧಾಭಕ್ತಿಯ ಕೇಂದ್ರ. ಈ ಹಾವಿನ ದೇವಾಲಯ ಮರ - ಬಳ್ಳಿಗಳಿಂದ ಆವೃತವಾಗಿದ್ದು ಸುಂದರ ನೋಟವನ್ನು ನೀಡುತ್ತದೆ. ಚಾಲ್ತಿಯಲ್ಲಿರುವ ನಂಬಿಕೆಯೊಂದರ ಪ್ರಕಾರ, 14 ನೇ ಶತಮಾನದಲ್ಲಿ ಮಹಾರಾಷ್ಟ್ರದಿಂದ ವರ್ಣಮಯ ಅಸಂಖ್ಯ ಸರ್ಪಗಳು ಇಲ್ಲಿಗೆ ಹರಿದುಬಂದವು. ಹಾಗಾಗಿಯೇ ಈ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಿ ನಾಗಮಂದಿರ ಎಂದು ಹೆಸರಿಡಲಾಯಿತು. ಇನ್ನೊಂದು ನಂಬಿಕೆಯ ಪ್ರಕಾರ, ಭಗವಂತ ಕೃಷ್ಣನು, ಕಾಳಿಂಗನನ್ನು ಮಣಿಸಿದ ಬಳಿಕ ಉಳಿದ ಹಾವುಗಳಿಗೆ ಯಮುನಾ ನದಿಯನ್ನು ಬಿಡುವಂತೆ ಹೇಳಿದ. ಅಲ್ಲಿಂದ ಕಾಳಿಂಗ ತನ್ನ ಹಲವಾರು ಅನುಯಾಯಿಗಳೊಡನೆ ಈ ಸ್ಥಳಕ್ಕೆ ಬಂದು ನೆಲೆಸಿದ ಎಂಬ ದಂತಕಥೆಯೂ ಇದೆ.