ಶ್ರೀನಗರದಿಂದ 128 ಕಿಮೀ ದೂರದಲ್ಲಿ ಶೇಖ್ ನೂರುದ್ದೀನ್ ಸಮಾಧಿಯಿದೆ. ಅಲಮ್ದರ್ ಎ ಕಾಶ್ಮೀರ್ ರೀತಿಯಲ್ಲೇ ಈ ಚ್ರಾರೆ ಶರೀಫ್ ಕೂಡಾ ಜನಪ್ರಿಯವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಇಸ್ಲಾಂ ಮತವನ್ನು ಪ್ರಚಾರ ಮಾಡಿದ ಶೇಖ್ ನೂರುದ್ದೀನ್ ನೂರಾನಿಗೆ ಈ ಸ್ತೂಪವನ್ನು ಅರ್ಪಿಸಲಾಗಿದೆ. ಇವರು ಅಫ್ಘಾನ್ನ ಗವರ್ನರ್ ಆಗಿದ್ದ ಅಟ್ಟಾ ಮಹಮದ್ ಖಾನ್ರಿಂದ ಇವರ ಹೆಸರಿನಲ್ಲಿ ನಾಣ್ಯಗಳನ್ನೂ ಮುದ್ರಿಸಲಾಗಿತ್ತು.
ಅಲಮ್ದರ್ ಎ ಕಾಶ್ಮೀರ್ ಬೆಂಬಲಿಗರಾದ ಸಂಗ್ರಾಮ್ ದರ್ ಈ ಮಸೀದಿಯನ್ನು ನಿರ್ಮಿಸಿದ್ದಾರೆ. ಶೇಕ್ ನೂರುದ್ದೀನ್ ನೂರಾನಿ ಈ ಮಸೀದಿಯಲ್ಲೇ ಪ್ರತಿ ಶುಕ್ರವಾರ ಪ್ರಾರ್ಥನೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಅಲಮ್ದರ್ ಎ ಕಾಶ್ಮೀರ ಮೃತರಾದ ನಂತರ ಅವರ ಆತ್ಮ ಹಲವು ದಿನಗಳವರೆಗೆ ಇಲ್ಲೇ ಇತ್ತು ಎಂದು ಇಲ್ಲಿನ ಜನ ನಂಬಿದ್ದಾರೆ.


Click it and Unblock the Notifications