ಬೋರ್ಡಿ ಪಟ್ಟಣದಿಂದ 10 ಕಿ.ಮೀ. ದೂರದಲ್ಲಿರುವುದೆ, ಉಂಬರಗಾವ್ನ ಕಲ್ಪತರು ಸಸ್ಯಕಾಶಿ. ಕಡಲ ಕಿನಾರೆಯ ಕಲ್ಪತರು ಎಂಬ ಪುಟ್ಟ ಗ್ರಾಮದಲ್ಲಿರುವುದೆ ಕಲ್ಪತರು ಸಸ್ಯಕಾಶಿ (ಬೊಟಾನಿಕಲ್ ಗಾರ್ಡನ್). ಈ ಸಸ್ಯೊದ್ಯಾನದಲ್ಲಿ ವೈವಿಧ್ಯಮಯ ಮರಗಳಿದ್ದು ಕಲ್ಪತರು ಪಟ್ಟಣಕ್ಕೆ ಹಸಿರು ಹೊದಿಕೆಯಂತೆ ಭಾಸವಾಗುತ್ತದೆ. ಮಳೆಗಾಲ ಹಾಗೂ ಮಳೆಗಾಲದ ನಂತರದ ಅವಧಿ ಈ ಪ್ರದೇಶಕ್ಕೆ ಭೇಟಿ ನೀಡಲು ಪ್ರಶಸ್ತ ಸಮಯ.
ರಾಮಾಯಣ ಚಿತ್ರೀಕರಣ ನಡೆದಿದ್ದು ಇಲ್ಲೇ:
ಕಲ್ಪತರು ಉದ್ಯಾನವನದ ಸಮೀಪದಲ್ಲೇ ನಿರ್ಮಿಸಲಾಗಿರುವ ವೃಂದಾವನ್ ಸ್ಟುಡಿಯೋದಲ್ಲಿ ರಾಮಾಯಣ ಧಾರಾವಾಹಿಯ ಚಿತ್ರೀಕರಣವಾಗಿತ್ತಂತೆ. ಈ ಪ್ರದೇಶವನ್ನು ದಹನು ಪುರಸಭೆ ಪ್ರಾಧಿಕಾರ ನಿರ್ವಹಿಸುತ್ತಿದೆ.