ರತನ್ಪುರ್ ಬಿಲಾಸಪುರದಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದ್ದು ಇದು ರಾಷ್ಟೀಯ ಹೆದ್ದಾರಿ 200ರಲ್ಲಿದೆ. ರತ್ನಾಪುರ ವಿವಿಧ ಸಾಮ್ರಾಜ್ಯದಲ್ಲಿ ಐತಿಹಾಸಿಕ ಆಳ್ವಿಕೆಯನ್ನು ಕಂಡಿತ್ತು. ಒಂಬತ್ತು ಅಡಿ ಎತ್ತರದ ಹೈಹ್ಗೈ ಸಾಮ್ರಾಜ್ಯದ ಬಾಬ ಭೈರವನಾಥ್ ಕ್ಷೇತ್ರಪಾಲ ಸಿಂಗ್ ಅವರ ಪುಥ್ಥಳಿ ರರತನ್ಪುರ್ ದ ಪ್ರವೇಶದ್ವಾರದಲ್ಲಿದೆ.
ಮತ್ತೊಂದು ಪ್ರಮುಖ ಅಂಶವೇನಂದರೆ ಚತ್ತೀಸಘಡದ ಒಂದು ಕಾಲದ ರಾಜಧಾನಿ ಇದಾಗಿತ್ತು. ರತನ್ ರಾಜ್ ಅವರು ಇದನ್ನು ಸ್ಥಾಪಿಸಿದ್ದು ಅವರ ಪೂರ್ವಜ ಹನ್ನೊಂದನೇ ಶತಮಾನದ ರಾಜಧಾನಿಯಾಗಿತ್ತು. ತದನಂತರ ಹೈಹೈವಾವನಸಿ ಮತ್ತು ಭೋಸ್ಲೆ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಕೊನೆಯದಾಗಿ ಬ್ರಿಟಿಷರು ಇದನ್ನು ದೇಶದ ರಾಜಧಾನಿಯಾಗಿ ನಿರ್ವಹಿಸುತ್ತಿದ್ದರು.
ರತನ್ಪುರ್ ದ ಮಹಾಮಾಯ ದೇವಾಲಯ ತುಂಬಾ ಪ್ರಸಿದ್ದಿಯಾಗಿದ್ದು ರಾಜ್ಯದೆಲ್ಲಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ರತನ್ ಸೇನ್, ಕಲ್ಚೂರಿಯನ್ ರಾಜ ಈ ದೇವಾಲಯವನ್ನು ನಿರ್ಮಿಸಿದ. ಕೆಲವೊಂದು ಪುರಾತನ ಕೊಳಗಳು ತಟದಲ್ಲಿದೆ.
ಭಕ್ತಾದಿಗಳು ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆಯುತ್ತಾರೆ. ಬುಧ ಮಹಾದೇವ, ರತ್ನೇಶ್ವರ್ ಮಹಾದೇವ ದೇವಾಲಯ ಮತ್ತು ಲಕ್ಷ್ಮೀ ದೇವಾಲಯ ರತ್ನಾಪುರದ ಇತರ ದೇವಾಲಯಗಳು. ರಾಯಪುರದಲ್ಲಿ ಬಸ್ಸಿನ ಸೌಲಭ್ಯವಿದೆ. ರತನ್ಪುರ್ ಪಾಲಿಯಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿದ್ದು, ಕೋರ್ಬಾದ ನಿರ್ಧಿಯಿಂದ ಹದಿನೈದು ಕಿಲೋಮೀಟರ್ ದೂರದಲ್ಲಿದೆ.
ಮರಾಠಾ ರಾಜ ಬಿಂಭಾಜಿ ಭೋಂಸ್ಲೆ ರಾಂಟೆಕ್ ನಿರ್ಮಿಸಿದ್ದು ಇದು ಬೆಟ್ಟದಲ್ಲಿರುವ ಮತ್ತೊಂದು ಪ್ರಮುಖ ದೇವಾಲಯ. ಸುಂದರ ಪುರಾತನ ಕೋಟೆ ರತನ್ಪುರ್ ದಲ್ಲಿದ್ದು ಪ್ರವಾಸಿಗರು ಪ್ರಸಿದ್ದ ಸ್ಥಳ. ಕೋಟೆ ಶಿಥಿಲ ಹಂತದಲ್ಲಿಲ್ಲ, ಹಾಗಾಗಿ ಇತಿಹಾಸದ ಬಗ್ಗೆ ತಿಳಿದು ಕೊಳ್ಳಬಹುದು. ಗಣೇಶ ಗೇಟ್ ಮನಮೋಹಕವಾಗಿದೆ.
ಇತರ ವಿಗ್ರಹಗಳು ಪ್ರಮುಖವಾಗಿ ಗಂಗಾ ಜಮುನಾ ಪುರಾತನ ವಿಗ್ರಹವಾಗಿದ್ದು ಕೋಟೆಯ ದ್ವಾರದಲ್ಲಿರುವ ಆಕರ್ಷಣೀಯ ಸ್ಥಳ. ಬ್ರಹ್ಮ, ವಿಷ್ಣು, ಸಿಚೌರಿ ಮತ್ತು ಜಾಗರ್ನಾಥ್ ದೇವಾಲಯ ಮತ್ತು ಶಿವನ ತಾಂಡವ ನ್ರುತ್ಯದ ವಿಗ್ರಹವನ್ನೂ ಇಲ್ಲಿ ನೋಡಬಹುದಾಗಿದೆ. ಖುಟಾಘಟ್ ಮತು ಖುದಿಯಾ ಅಣೆಕಟ್ಟು ರತ್ನಾಪುರದಲ್ಲಿದೆ.