ಭಿಲಾಯಿ ನಗರ ಚತ್ತೀಸಗಡದ ದುರ್ಗ್ ಜಿಲ್ಲೆಯಲ್ಲಿದೆ. ಇದು ರಾಷ್ಟೀಯ ಹೆದ್ದಾರಿ ನಂಬರ್ ಆರರಲ್ಲಿದೆ, ಇದು ರಾಯಪುರದಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ. ರಾಯಪುರ ಚತ್ತೀಸಗಡದ ರಾಜಧಾನಿ. ಭಾರತದ ಅತ್ಯಂತ ದೊಡ್ಡ ಉಕ್ಕಿನ ಕಾರ್ಖಾನೆ ಇರುವುದು ಭಿಲೈನಲ್ಲಿ. ಭಿಲಾಯಿ ಸ್ಟೀಲ್ ಪ್ಲಾಂಟ್ ಇಲ್ಲಿದೆ. ಭಾರತದಲ್ಲಿ ರೈಲು ನಿರ್ಮಾಣವಾಗುವ ಏಕೈಕ ನಗರವೆಂದರೆ ಅದು ಭಿಲಾಯಿನಲ್ಲಿ.
ಸಂಸ್ಕೃತಿ ಮತ್ತು ಹಬ್ಬ
ಎಲ್ಲಾ ಪ್ರಮುಖ ಹಬ್ಬಗಳಾದ ದೀಪಾವಳಿ, ಹೋಳಿ, ದುರ್ಗಾ ಪೂಜೆ, ಈದ್ ಮುಂತಾದ ಹಬ್ಬವನ್ನು ಪಾರಂಪರಿಕ ಸಡಗರದಿಂದ ಇಲ್ಲಿ ಆಚರಿಸಲಾಗುತ್ತದೆ. ಸಿಖ್ ಜನಸಂಖ್ಯೆ ಇಲ್ಲಿ ಹೆಚ್ಚು ಇರುವುದರಿಂದ, ಸಿಖ್ಖರ ಹಬ್ಬಗಳಾದ ಬೈಸಾಖಿ, ಗುರು ಗೋಬಿಂದ್ ಸಿಂಗ್, ಗುರುಪರ್ಭಾ ಮುಂತಾದ ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ. ಭಿಲಾಯಿ ನಗರವನ್ನು ಮಿನಿ ಇಂಡಿಯಾ ಎಂದೂ ಕರೆಯುತ್ತಾರೆ, ಯಾಕೆಂದರೆ ಇಲ್ಲಿ ಎಲ್ಲಾ ಧರ್ಮದ ಜನಗಳು ವಾಸಿಸುತ್ತಾರೆ.
ಭಿಲಾಯಿ ಸುತ್ತಮುತ್ತವಿರುವ ಪ್ರವಾಸಿ ತಾಣಗಳು
ಭಿಲಾಯಿ ನಗರದ ಪ್ರಮುಖ ಆಕರ್ಷಣೆಯೆಂದರೆ ಮೈತ್ರಿ ಭಾಗ್, ಸಿವಿಕ್ ಸೆಂಟರ್, ಕಾಲಿಬಾರಿ ಇತ್ಯಾದಿ. ಮೈತ್ರಿ ಭಾಗ್ ಪ್ರಾಣಿ ಸಂಗ್ರಹಾಲಯವಾಗಿದ್ದು ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈ ಭಾಗವು ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ ತುಂಬಾ ಸಣ್ಣ ಸಣ್ಣ ದೇವಾಲಯಗಳಿವೆ.
ಭಿಲಾಯಿ ವಾತಾವರಣ
ಭಿಲಾಯಿ ನಲ್ಲಿ ಬೇಸಿಗೆಯಲ್ಲಿ ಬಿಸಿಯ ಮತ್ತು ಚಳಿಗಾಲದಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ.