ಮಲಹರ್ ಬಿಲಾಸಪುರದಿಂದ್ ನಲವತ್ತು ಕಿಲೋಮೀಟರ್ ದೂರದಲ್ಲಿದೆ, ಇದು ಬಿಲಾಸಪುರ - ರಾಯಗರ್ ರಸ್ತೆಯಲ್ಲಿದೆ, ಮಸ್ತೂರಿ ಬ್ಲಾಕಿನಿಂದ ಹದಿನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಸರ್ವಾಪುರ್ ಎಂದೂ ಹೆಸರಾಗಿರುವ ಇದು ಒಂದು ಕಾಲದಲ್ಲಿ ಚತ್ತೀಸಘಡದ ರಾಜಧಾನಿಯಾಗಿತ್ತು. ಇದು ಭೌಗೋಳಿಕವಾಗಿ ಮುಖ್ಯ ಸ್ಥಳ.
ಪಟೇಲೇಶ್ವರ ದೇವಾಲಯ, ದೇವ್ರಿ ದೇವಾಲಯ ಮತ್ತು ದಿಂದೇಶ್ವರಿ ದೇವಾಲಯ ಮುಂತಾದ ಪ್ರಸಿದ್ದ ದೇವಾಲಯ ಹತ್ತು ಮತ್ತು ಹನ್ನೊಂದನೇ ಶತಮಾನದ್ದು. ಜೈನರ ಸ್ಮಾರಕಗಳು ಈ ಭಾಗದಲ್ಲಿ ಭೂಗರ್ಭ ಶೋಧನೆಯ ಸಮಯದಲ್ಲಿ ಲಭ್ಯವಾಗಿದೆ. ವಿಷ್ಣುವಿನ ನಾಲ್ಕು ಹಸ್ತದ ಮೂರ್ತಿ ಇಲ್ಲಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಕ್ರಿಸ್ತಪೂರ್ವ 1000 ಇಸವಿಯ ಕಲ್ಚೂರಿ ಸಾಮ್ರಾಜ್ಯಕ್ಕೆ ಸೇರಿದ ಸ್ಮಾರಕಗಳು ಈ ಪ್ರದೇಶದಲ್ಲಿ ಲಭ್ಯವಾಗಿದೆ. ಪಟೇಲೇಶ್ವರ ಕೇದಾರ ದೇವಾಲಯದಲ್ಲಿ ಗೋಮುಖಿ ಶಿವಲಿಂಗ ಪ್ರಮುಖ ಆಕರ್ಷಣೆ. ದಿದ್ನೇಶ್ವರಿ ದೇವಾಲಯ ಕಲ್ಚೂರಿ ಸಾಮ್ರಾಜ್ಯಕ್ಕೆ ಸೇರಿದ್ದು. ದಿಯೋರ್ ದೇವಾಲಯ ಶಿಲ್ಲಕಲೆಗೆ ಹೆಸರುವಾಸಿಯಾಗಿದೆ.
ಮಲಹರ್ ನಲ್ಲಿ ಮ್ಯೂಸಿಯಂಗಳಿದ್ದು ಇದನ್ನು ಸರಕಾರ ನಿರ್ವಹಿಸುತ್ತಿದೆ. ಇಲ್ಲಿ ಪುರಾತನ ಕಾಲದ ವಿಗ್ರಹಗಳು, ಮಲಹರ್ ಭೌಗೋಳಿಕವಾಗಿ ಪ್ರಮುಖ ಪಟ್ಟಣವಾಗಿದ್ದು ಭಾರತದ ಭೌಗೋಳಿಕ ಇಲಾಖೆ ಅಧೀನದಲ್ಲಿದೆ. ಚೈನಾದ ಇತಿಹಾಸ, ಯುಯಾನಜಂಗ್ ಮಲಹರಿಗೆ ಭೇಟಿ ನೀಡಿದ್ದು ಈ ಸ್ಥಳಕ್ಕಿರುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ.