ಲಿಂಗರಾಜ ದೇವಾಲಯದ ಉತ್ತರ ದಿಕ್ಕಿನಲ್ಲಿ ನೆಲೆಸಿದೆ ಬಿಂದು ಸಾಗರ ಕೆರೆ. ಭುವನೇಶವರದಲ್ಲೆ ಅತಿ ಹೆಚ್ಚು ಭೇಟಿ ನೀಡಲ್ಪಟ್ಟ ಪ್ರವಾಸಿ ಆಕರ್ಷಣೆ ಇದಾಗಿದೆ. ಕುಟುಂಬ ಸಮೇತ ವಿರಾಮ ಕಾಲವನ್ನು ಆನಂದದಿಂದ ಕಳೆಯಲು ಇದೊಂದು ಉತ್ತಮ ಪಿಕ್ನಿಕ್ ತಾಣವಾಗಿದೆ. ಈ ಕೆರೆಯು 1300 ಅಡಿಗಳಷ್ಟು ಉದ್ದ ಹಾಗು 700 ಅಡಿಗಳಷ್ಟು ಅಗಲವಾಗಿದೆ.
ಅಲ್ಲದೆ ಈ ಕೆರೆಯು ಹಿಂದು ಯಾತ್ರಾರ್ಥಿಗಳಿಗೂ ಮಹತ್ತರವಾಗಿದೆ. ಪ್ರತಿ ವರ್ಷವು ಲಿಂಗರಾಜ ದೇವಸ್ಥಾನದ ಮೂಲ ವಿಗ್ರಹವನ್ನು ಇಲ್ಲಿಗೆ ಸ್ನಾನ ಕೈಂಕರ್ಯಕ್ಕಾಗಿ ತರಲಾಗುತ್ತದೆ. ಆದ್ದರಿಮ್ದ ಈ ಕೆರೆಯಲ್ಲಿ ಸ್ನಾನ ಮಾಡಿದರೆ ಕೇವಲ ರೋಗಗಳಷ್ಟೆ ಅಲ್ಲ ಪಾಪಕರ್ಮಗಳೂ ಕೂಡ ತೊಳೆದು ಹೋಗುತ್ತವೆ ಎಂಬ ನಂಬಿಕೆ ಇಲ್ಲಿನ ಜನರದ್ದು.