ಪಾರ್ವತಿ ಗುಹೆಯನ್ನು ದರ್ಶಿಸಿದ ಮೇಲೆ ಭೋಜರಾಜನ ಅರಮನೆಯ ಪಳೆಯುಳಿಕೆಯನ್ನು ಕಾಣಬಹುದು. ಅರಮನೆಯು ಪೂರ್ಣ ನಾಶವಾಗಿದೆ ಆದರೆ ನಾವು ಅದರ ತಳಹದಿಯನ್ನು ಇನ್ನೂ ಕಾಣಬಹುದು. ಇದು ಪೂರ್ಣ ಪ್ರಮಾಣದಲ್ಲಿ ಇಲ್ಲದಿದ್ದರೂ ಅರ್ಧಭಗ್ನಾವಶೇಷವನ್ನು ನೋಡಿ ಅದರ ಹಿಂದಿನ ಭವ್ಯತೆಯನ್ನು ಊಹಿಸಬಹುದು. ಅದರ ನಕ್ಷಾಯೋಜನೆಯನ್ನು ಹಾಗು ಅದರ ಹಿಂದಿಂದ ಅಧ್ಭುತ ಕಾರ್ಯ ಯೋಜನೆಯನ್ನು ಕಂಡು ವಿಸ್ಮಿತಗೊಳ್ಳುವಂತಿದೆ. ಇದು ಭೋಜರಾಜನ 'ಸಮಾರಾಂಗಣ ಸೂತ್ರಧಾರ' ಎಂಬ ಬಿರುದಿನ ಸಮರ್ಥನೆಯಂತಿದೆ. ಅರಮನೆಯ ಹಜಾರದಲ್ಲಿನ ಕಲ್ಲಿನ ಕೆತ್ತನೆಗಳು ಮತ್ತು ಅತ್ಯಂತ ನಿಕೃಷ್ಠ ನಿರೂಪಣೆಗಳು ಅತ್ಯಾಕರ್ಷಕವಾಗಿದೆ. ಆ ಕೆತ್ತನೆಗಳಲ್ಲಿ ನೀವು ಆ ಕಾಲದ ವಿನೋದಾಟಗಳ ನಿರೂಪಣೆ ಹಾಗು 11 ನೇ ಶತಮಾನದ ರಾಜನ ಆಸ್ಥಾನದ ವಿನೋದಾಟಗಳ ನಿದರ್ಶನವನ್ನು ಕಾಣಬಹುದು.