ಭರತ್ಪುರ್ ನ ಗಂಗಾ ದೇವಸ್ಥಾನ ಒಂದು ಜನಪ್ರಿಯ ದೇಗುಲ. 1845 ರಲ್ಲಿ ಮಹಾರಾಜಾ ಬಲ್ವಂತ್ ಸಿಂಗ್ ಇದರ ನಿರ್ಮಾಣವನ್ನು ಪ್ರಾರಂಭಿಸಿ, 90 ವರ್ಷಗಳ ತರುವಾಯ ಇದನ್ನು ಪೂರ್ಣಗೊಳಿಸಲಾಯಿತು. ಈ ದೇವಸ್ಥಾನದ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಮಹಾರಾಜಾ ಬಲ್ವಂತ್ ಸಿಂಗ್ ನ ಐದನೆ ತಲೆಮಾರಿನ ರಾಜನಾದ ಬ್ರಿಜೇಂದ್ರ ಸಿಂಗ್, ಗಂಗಾ ದೇವತೆಯ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದನು. ರಾಜ್ಯದ ಎಲ್ಲ ಉದ್ಯೋಗಿಗಳ ಒಂದು ತಿಂಗಳಿನ ಸಂಬಳದಿಂದ ಈ ದೇವಸ್ಥಾನವನ್ನು ಕಟ್ಟಲಾಯಿತೆಂದು ಹೇಳಲಾಗುತ್ತದೆ.ಮುಘಲ್, ದ್ರಾವಿಡಿಯನ್ ಮತ್ತು ರಜಪುತ್ ವಾಸ್ತು ಕಲೆಯ ಮಿಶ್ರಣವನ್ನು ಈ ದೇವಸ್ಥಾನವು ಹೊಂದಿದೆ. ದೇವಸ್ಥಾನದ ಗೋಡೆಗಳು ಮತ್ತು ಖಂಬಗಳು ಅತ್ಯಾಕರ್ಷಕವಾದ ಕೆತ್ತನೆಯ ಕೆಲಸಗಳನ್ನು ಒಳಗೊಂಡಿದೆ. ಕೃಷ್ಣ, ಲಕ್ಷ್ಮಿ-ನಾರಾಯಣ ಮತ್ತು ಶಿವ್-ಪಾರ್ವತಿಯರ ಪ್ರತಿಮೆಗಳು ಈ ದೇವಸ್ಥಾನದ ಪ್ರಮುಖ ಆಕರ್ಷಣೆ.ಗಂಗಾಶಪ್ತಮಿ ಮತ್ತು ಗಂಗಾ ದಶಹರಾ ಉತ್ಸವಗಳಂದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.