ಹಿಂದೂ ಪುರಾಣದಲ್ಲಿ ಉಲ್ಲೇಖಿಸಿರುವ ಸಮುದ್ರ ಮಥನದ ಅವಿಭಾಜ್ಯ ಅಂಗವಾಗಿರುವ ಪರ್ವತವೇ ಈ ಮಂದಾರ ಪರ್ವತ. ಈ ಪರ್ವತದಲ್ಲಿನ ವಿವಿಧ ಪವಿತ್ರ ಸ್ಥಳಗಳ ಬಗ್ಗೆ ಬೇರೆಬೇರೆ ಪುರಾಣಗಳಲ್ಲಿ ಬಹಳಷ್ಟು ಉಲ್ಲೇಖವಿದೆ. ಕೃಷ್ಣಾವತಾರದಲ್ಲಿ ಕೃಷ್ಣನ ನೆಲೆಯೂ ಇಲ್ಲೇ ಆಗಿತ್ತು ಎಂದು ನಂಬಲಾಗುತ್ತದೆ. ಈ ಪರ್ವತವನ್ನು ಹೊಗಳಲೇಬೇಕಾದಂತಹ ಒಂದು ಗುಣವೆಂದರೆ, ಇದು ತುಂಬಾ ಕಲ್ಲುಗಳಿಂದ ಮಾಡಲ್ಪಟ್ಟುದು ಅಲ್ಲ. ಬದಲಿಗೆ ಇದು ಒಂದೇ ಒಂದು ಕಲ್ಲಿನಿಂದ ನಿರ್ಮಾಣವಾಗಿದೆ. ಈ ಬೆಟ್ಟವು ಕೆತ್ತನೆಗಳು, ಮೂರ್ತಿಗಳು ಹಾಗೂ ಹಲವು ಕಲ್ಲಿನಲ್ಲಿ ಕೊರೆತ ಶಿಲ್ಪಗಳಿನ್ದ ಸಮೃದ್ಧವಾಗಿದೆ. ಜೈನರ ನಡುವೆ ಕೂಡ ಈ ಪರ್ವತವು ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ. 12 ನೇ ತೀರ್ಥಂಕರರು ಈ ಪರ್ವತದ ಶಿಖರದಲ್ಲಿ ನಿರ್ವಾಣ ಪಡೆದರು ಎಂದು ನಂಬಲಾಗುತ್ತದೆ.