ಬರಾನ್ಬಿಲಾಸ್ಗಢವು ಬರಾನ್ನ ಕಿಶನ್ಗಂಜ್ನಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಇದು ಖೇಚಿ ಆಡಳಿತದಲ್ಲಿ ಪ್ರಮುಖವಾದ ನಗರವಾಗಿತ್ತು, ಆದರೆ ಮೊಘಲ್ ರಾಜ ಔರಂಗಜೇಬ್ನ ಆದೇಶದಿಂದ ಇದನ್ನು ನಾಶಮಾಡಲಾಗಿತ್ತು. ಖೇಚಿ ರಾಜಕುಮಾರಿಗೆ ಆತ ಆಕರ್ಷಿತನಾಗಿದ್ದ ಮತ್ತು ತನ್ನ ಸೇನೆಯನ್ನು ಕಳುಹಿಸಿ ಅವಳನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದ್ದ. ಮೊಘಲ್ ಸೇನೆಯು ನಗರವನ್ನು ಹಾಳು ಮಾಡಿದರು. ಆದರೆ ರಾಜಕುಮಾರಿ ಬಿಲಾಸಿ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು. ಘಟನೆಯ ನಂತರದಲ್ಲಿ ಈ ಪ್ರದೇಶವನ್ನು ಕನ್ಯಾದೇಹ್ ಎಂದು ಕರೆಯಲಾಗಿದೆ.


Click it and Unblock the Notifications