ಗಂಧಮರ್ದನ ಬೆಟ್ಟದ ತಪ್ಪಲಿನಲ್ಲಿ ಹರಿಶಂಕರ ದೇವಾಲಯ ಬರುತ್ತದೆ. ಇದು ನೈಸರ್ಗಿಕ ಸೌಂದರ್ಯದಲ್ಲಿ ನೆಲೆಸಿದ ಹಿಂದೂ ಯಾತ್ರಾ ಸ್ಥಳವಾಗಿದೆ. ಈ ಸ್ಥಳವು ಹರಿ ಶಂಕರ ದೇವಾಲಯವನ್ನು ಒಳಗೊಂಡಿದ್ದು ಇದು ಶಿವ ಮತ್ತು ಕೃಷ್ಣ ಇಬ್ಬರಿಗೂ ಸಂಬಂಧಿಸಿದ ದೇವಾಲಯವಾಗಿದೆ. ಈ ದೇವಾಲಯದ ಆವರಣದಲ್ಲಿ ಹನುಮಂತ, ಜಗನ್ನಾಥ ಮತ್ತು ರಾಮ ದೇವರ ಗುಡಿ ಕೂಡ ಇದೆ. ಭಕ್ತಾದಿಗಳಿಗೆ ಈ ದೇವಾಲಯದ ಆವರಣದಲ್ಲಿ ಧರ್ಮಶಾಲೆ ಕೂಡ ಇದೆ. ಚೌಹಾಣ ರಾಜವಂಶದವರಿಗೆ ಕ್ರಿ,ಶ 14 ನೇ ಶತಮಾನದಲ್ಲಿ ಹರಿಶಂಕರ ಮೂರ್ತಿ ಸಿಕ್ಕಿತು. ನಂತರ 12 ನೆ ಶತಮಾನದ ನರ್ತಿಸುತ್ತಿರುವ ಗಣೇಶನ ವಿಗ್ರಹ ಕೂಡ ದೊರಕಿತು ಎನ್ನಲಾಗಿದೆ.
ಗಂಧಮರ್ದನ ಬೆಟ್ಟದ ಇನ್ನೊಂದು ಬದಿಯಲ್ಲಿ ನರಸಿಂಗನಾಥ ದೇವಾಲಯವಿದೆ. ಹರಿಶಂಕರ ದೇವಾಲಯ ಮತ್ತು ನರಸಿಂಗ ನಾಥ ದೇವಾಲಯದ ಮಧ್ಯ ಪ್ರಸ್ಥಭೂಮಿಯು ಬೌದ್ಧ ಅವಶೇಷಗಳಿಂದ ಆವರಿಸಲ್ಪಟ್ಟಿದೆ ಇದನ್ನು ಪರಿಮಳಗಿರಿ ವಿಶ್ವವಿದ್ಯಾನಿಲಯ ಎಂದು ಕರೆಯಲಾಗಿದೆ.
ಹರಿಶಂಕರವನ್ನು ವರ್ಷಪೂರ್ತಿ ಭೇಟಿ ನೀಡಬಹುದು. ಇದೊಂದು ಹರ್ಬಲ್ ಉದ್ಯಾನವನವಾಗಿದ್ದು ಇಲ್ಲಿ 1000 ರೀತಿಯ ಹರ್ಬಲ್ ಮರಗಳನ್ನು ಕಾಣಬಹುದು.ಈ ಸ್ಥಳವು ಉತ್ತಮ ರಸ್ತೆ ವ್ಯವಸ್ಥೆ ಹೊಂದಿದ್ದು,ಸುಲಭವಾಗಿ ಸಂಚರಿಸಬಹುದು. ಬಲಂಗೀರ್ ನಿಂದ ಹರಿಶಂಕರಕ್ಕೆ ಬಸ್ಸಿನ ಸಂಪರ್ಕ ಇದೆ. ಇದು ಬಲಂಗೀರ್ ನಿಂದ 120 ಕಿ ಮೀ ಅಂತರದಲ್ಲಿದೆ.