ಗುರುದ್ವಾರಾ ಸಂತೋಖಸರ ಸಾಹೀಬ್ ಹರಮಂದಿರ ಸಾಹೀಬ್ ಪಕ್ಕದಲ್ಲಿಯೇ ಇದೆ. ಗುರು ಅರ್ಜುನ್ ದೇವ್ಜಿ ಕಟ್ಟಿಸಿದ ಐದು ಪವಿತ್ರ ತೀರ್ಥಗಳಲ್ಲಿ ಒಂದನ್ನು ಐತಿಹಾಸಿಕ ಸಿಖ್ರ ಮಂದಿರ ಒಳಗೊಂಡಿದೆ. ಈ ಪವಿತ್ರ ಸರೋವರವನ್ನು ಅಗೆಯುವ ಕೆಲಸವನ್ನು ಶುರು ಮಾಡಿದವರು ಗುರು ರಾಮದಾಸಜಿ ಅವರು. ಆ ಕೆಲಸವನ್ನು ಅವರು ತಮ್ಮ ಮಾವ ಮತ್ತು ಆಗಿನ ಸಿಖ್ ಗುರುವಾಗಿದ್ದ ಗುರು ಅಮರದಾಸಜಿಯ ಆದೇಶದ ಮೇರೆಗೆ ಮಾಡಿದರು. ಗುರು ಅರ್ಜುನ್ ದೇವಜಿ ಸ್ನಾನದ ಈ ಕೊಳ ಅಗೆಯುವ ಕೆಲಸವನ್ನು 1587 ಹಾಗು 1589ರ ಅವಧಿಯಲ್ಲಿ ಬಾಬಾ ಬುದ್ಧರ ಸಹಾಯದಿಂದ ಮುಕ್ತಾಯಗೊಳಿಸಿದರು.
ಹೀಗೆ ಕೊಳ ಅಗೆಯುವ ಕೆಲಸ ನಡೆಯುತ್ತಿರಬೇಕಾದರೆ ಒಬ್ಬ ಸಂತ ಧ್ಯಾನ ಮಾಡುತ್ತಾ ಕುಳಿತಿರುವುದನ್ನು ಈ ಸ್ಥಳದಲ್ಲಿಯೇ ಕಂಡುಬಂದಿತಂತೆ. 'ಸಂತಖ' ಎಂಬ ಈ ಯೋಗಿ ತಾನು ಮೋಕ್ಷವನ್ನು ಪಡೆಯಲು ತನ್ನ ಗುರುವಿಗಾಗಿ ಕಾಯುತ್ತಿರುವುದಾಗಿ ಹೇಳಿ ಕೊನೆಯುಸಿರೆಳೆದನಂತೆ. ಹೀಗಾಗಿ ಈ ಸಂತನ ನಂತರ ಈ ಮಂದಿರವನ್ನು ಗುರು ರಾಮದಾಸಜಿಯವರು ಹೆಸರಿಸಿದ್ದಾರೆ. ಗುರುದ್ವಾರ ತಹಲಿ ಸಾಹೀಬ್ ಎಂತಲೂ ಇದನ್ನು ಕರೆಯುತ್ತಾರೆ. ಈ ಐತಿಹಾಸಿಕ ಮಂದಿರಕ್ಕೆ ಭೇಟಿ ಕೊಟ್ಟರೆ ಒಳ್ಳೆಯದು.