1628ನೇ ಇಸ್ವಿಯಲ್ಲಿ ಸಿಖ್ ಸಮುದಾಯದ 6ನೇ ಗುರು ಹರಗೋಬಿಂದ್ ಜೀಯವರು ಬಿಬೇಕಸರ್ ಸರೋವರ ನಿರ್ಮಿಸಿದರು. ಸುಂದರವಾದ ಗುರುದ್ವಾರ ಬಿಬೇಕಸರ್ ಸಾಬೀಬ್ ಅನ್ನು ಈ ಸರೋವರದ ತಟದಲ್ಲಿ ಮಹಾರಾಜ ರಂಜಿತ್ ಸಿಂಗ್ ಕಟ್ಟಿಸಿದ. ಗುರು ಹರಗೋಬಿಂದ್ ಜೀ ತಮ್ಮ ಬೇಟೆಯ ನಂತರ ವಿಶ್ರಮಿಸುತ್ತಿದ್ದ ಸ್ಥಳದಲ್ಲಿ ಗುರುದ್ವಾರವನ್ನು ಕಟ್ಟಿಸಿದರು. ಇದೇ ಸ್ಥಳ ಅವರು ಸಂಜೆಯ ಸಭೆಗಳನ್ನು, ಧಾರ್ಮಿಕ ವಿಷಯಗಳನ್ನು ಬುದ್ಧಿವಂತರ ಜೊತೆ ಚರ್ಚಿಸಲು ಬಳಸುತ್ತಿದ್ದರು.
ಸುಂದರವಾದ ಪರಿಸರದ ಮಧ್ಯದಲ್ಲಿ ಗುರುದ್ವಾರಾದ ಒಳಗೆ ಒಂದು ಆಕರ್ಷಕ ಉದ್ಯಾನವನವಿದೆ. ಇದೇ ಸ್ಥಳದಲ್ಲಿ ಗುರು ಹರಗೋಬಿಂದ್ ಜೀಯವರು ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಿದ್ದರು. ಸರೋವರದ ಅಂಚಿನಲ್ಲಿ ಕರೀರ ಎಂಬ ವೃಕ್ಷವಿದೆ. ಗುರುಗೋಬಿಂದ್ ಜೀಯವರು ತಮ್ಮ ಕುದುರೆಯನ್ನು ಇದೇ ಮರಕ್ಕೆ ಕಟ್ಟುತ್ತಿದ್ದರು. ಈಗಲೂ ಸಹ ಈ ಮರ ಗುರುದ್ವಾರದ ಆವರಣದಲ್ಲಿದೆ. ಈಗ ಇದರ ಉಸ್ತುವಾರಿಯನ್ನು ಶಿರೋಮಣಿ ಗುರುದ್ವಾರ ಪರಬಂಧಕ್ ಸಮೀತಿ ವಹಿಸಿಕೊಂಡಿದೆ. ಇಲ್ಲಿ ಪ್ರತಿ ತಿಂಗಳ ಕೊನೆಯ ಶನಿವಾರದಂದು ಭೇಟಿ ನೀಡುವುದು ಸೂಕ್ತ.