ಯಲ್ಲಾಪುರವನ್ನು ನೋಡಲು ಬರುವ ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ಅವರು ಇಲ್ಲಿನ ಸಾತೊಡಿ ಜಲಪಾತಕ್ಕೆ ಒಮ್ಮೆ ಭೇಟಿಕೊಡಬಹುದು. ಇದು ಕರ್ನಾಟಕ ಪ್ರಸಿದ್ಧ ಜಲಪಾತಗಳಲ್ಲಿ ಒಂದು ಎಂದು ಸ್ಥಾನ ಪಡೆದಿದೆ. ಈ ಜಲಪಾತವು ಇಲ್ಲಿಗೆ ಸಮೀಪದ ಕಲ್ಲರಮನೆ ಘಾಟಿನಲ್ಲಿ ಹರಿಯುವ ಅನೇಕ ಅನಾಮಧೇಯ ತೊರೆಗಳಿಂದ ಉದ್ಭವಿಸುತ್ತದೆ. ಇದು ಯಲ್ಲಾಪುರದಿಂದ 25 ಕಿ.ಮೀ ದೂರದಲ್ಲಿನ ಗಣೇಶ ಗುಡಿ ಅರಣ್ಯ ಪ್ರದೇಶದಲ್ಲಿ ನೆಲೆಸಿದೆ. ಸಾತೊಡಿ ಜಲಪಾತವು ಉತ್ತರ ಕನ್ನಡದ ನಯಾಗರ ಎಂದು ಬಿರುದು ಪಡೆದಿದೆ.ಇದು ದಟ್ಟ ಕಾಡಿನ ನಡುವೆ ಸುಮಾರು 49.2 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದ್ದು ಕೊಡಸಳ್ಳಿ ಜಲಾಶಯದ ಹಿನ್ನೀರಿನಲ್ಲಿ ಸಂಗಮವಾಗುವುದರ ಮೂಲಕ ಅಂತ್ಯವಾಗುತ್ತದೆ. ಪ್ರವಾಸಿಗರು ಇಲ್ಲಿ ವಿಹಾರ, ಚಾರಣ, ನದಿಯಲ್ಲಿ ದೋಣಿ ಚಾಲನೆ ಮತ್ತು ಪಕ್ಷಿ ವೀಕ್ಷಣೆಯಂತಹ ಚಟುವಟಿಕೆಗಳನ್ನು ಕೈಗೊಂಡು ಆನಂದಿಸಬಹುದು. ಪ್ರವಾಸಿಗರು ಮಳೆಗಾಲದಲ್ಲಿ ಇಲ್ಲಿಗೆ ಭೇಟಿಕೊಡುವ ಯೋಜನೆಯನ್ನು ಕೈಬಿಡುವುದು ಒಳ್ಳೆಯದು. ನವೆಂಬರ್ ನಿಂದ ಏಪ್ರೀಲ್ ವರೆಗಿನ ಸಮಯವು ಇಲ್ಲಿನ ಜಲಪಾತ ವೀಕ್ಷಿಸಲು ಬರುವವರಿಗೆ ಸಕಾಲವಾಗಿದೆ.