ವಾಲ್ಮೀಕಿ ರಾಷ್ಟ್ರೀಯ ಉದ್ಯಾನವು ಸುಮಾರು 880 ಕಿ.ಮೀ. ವ್ಯಾಪ್ತಿಯಲ್ಲಿರುವ ವನ್ಯಜೀವಿ ಅಭಯಾರಣ್ಯ. ಪಶ್ಚಿಮ ಚಂಪಾರಣ್ ನಲ್ಲಿರುವ ಶಿವಾಲಿಕ್ ಪರ್ವತ ಶ್ರೇಣೆಯ ಹೊರಗಿನ ಕ್ಷೇತ್ರದಲ್ಲಿದೆ. ಈ ವನ್ಯಜೀವಿ ಅಭಯಾರಣ್ಯವು ಹುಲಿಯಂತಹ ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಆಶ್ರಯತಾಣ. ಅಭಯಾರಣ್ಯವನ್ನು ದಟ್ಟವಾದ ಹಸಿರು ಕಾಡು...
ಪಶ್ಚಿಮ ಚಂಪಾರಣ್ ನಲ್ಲಿ ನೆಲೆಯಾಗಿರುವ ಮೂರು ಪವಿತ್ರ ನದಿಗಳಾದ ಪಚಾನಂದ, ಸೋನಾಹ ಮತ್ತು ಗಂದಕ್ ನ ಸಂಗಮವೇ ತ್ರಿವೇಣಿ ದಡ. ಪ್ರತೀ ವರ್ಷ ಮಕರ ಸಂಕ್ರಾಂತಿ ದಿನ ಇಲ್ಲಿ ದೊಡ್ಡ ಮೇಳವನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ನಡೆಯುವ `ಪವಿತ್ರ ನದಿಗಳಲ್ಲಿನ ಸ್ನಾನ ಹಬ್ಬ' ಸಂಗಮದಲ್ಲಿ ಸಾವಿರಾರು ಮಂದಿ ಭಕ್ತರು ಬಂದು ಪವಿತ್ರ...
ಅಶೋಕ ಸ್ಥಂಭವು 2300 ವರ್ಷ ಹಳೆಯದ್ದಾಗಿದ್ದು, ಇದು ಕೂಡ ಅದು ಹಾಗೆ ಉಳಿದುಕೊಂಡಿದೆ. ಈ ಸ್ಥಂಭವು ಸುಮಾರು 35 ಅಡಿ ಎತ್ತರವಿದೆ. ಈ ಸ್ಥಂಭದ ಸುದೃಢತೆ ಮತ್ತು ಸೊಗಸು ಮೌರ್ಯ ಸಾಮ್ರಾಜ್ಯದ ವಾಸ್ತುಶಿಲ್ಪ ಕಲೆಗೆ ಸಾಕ್ಷಿಯಾಗಿ ನಿಂತಿದೆ.
52 ಕೋಟೆಗಳ ಅವಶೇಷವೇ ಬಾವನ್. ಬಾವನ್ ಅಂದರೆ 52 ಮತ್ತು ಗರ್ಹ್ ಅಂದರೆ ಕೋಟೆ ಎಂದರ್ಥ. ಇದನ್ನು ತ್ರಿಪಾನ್ ಬಜಾರ್ ಎಂದೂ ಕರೆಯಲಾಗುತ್ತದೆ. ಗ್ರಾಮದ ಉತ್ತರಕ್ಕೆ ಮತ್ತು ವಾಯುವ್ಯದ ಕಡಿಮೆ ಅಂತರದಲ್ಲಿರುವ 52 ಕೋಟೆಗಳ ಅವಶೇಷಗಳು ಮತ್ತು 53 ಮಾರುಕಟ್ಟೆಗಳು ಬೃಹತ್ ದಡಗಳ ಅವಶೇಷಗಳು. ಬಾವನ್ ಗಡಿಯ ಇತಿಹಾಸದ ಬಗ್ಗೆ ಹಲವಾರು...
ಭಿಕ್ನತೋಹರಿ ಪಕೃತಿ ಸೌಂದರ್ಯದ ಭೂದೃಶ್ಯದ ಮಧ್ಯೆ ನೆಲೆನಿಂತಿದೆ. ಈ ತಾಣದಿಂದ ಮಂಜಿನಿಂದ ಮುಸುಕಿರುವ ಹಿಮಾಲಯ ಮತ್ತು ಅನ್ನಪೂರ್ಣ ಶ್ರೇಣೆಯ ರಮಣೀಯ ನೋಟ ನೋಡಬಹುದು. ಇದು ತುಂಬಾ ಜನಪ್ರಿಯ ತಾಣವಾಗಿದ್ದು, ಒಮ್ಮೆ ರಾಜ ಜಾರ್ಜ್ ವಿ ಇಲ್ಲಿಗೆ ಭೇಟಿಯಾಡಲು ಬಂದಿದ್ದನೆಂದು ನಂಬಲಾಗಿದೆ.
ನೇಪಾಳ ಮತ್ತು ಪಶ್ಚಿಮ ಚಂಪಾರಣ ಮಧ್ಯೆ ಇರುವ ಸುಮೇಶ್ವರ ಪರ್ವತ ಶ್ರೇಣೆಯಲ್ಲಿ ನೆಲೆನಿಂತಿರುವ ಐತಿಹಾಸಿ ಕೋಟೆ ಸುಮೇಶ್ವರ ಕೋಟೆ. ಕಡಿದಾದ ಪರ್ವತ ಶ್ರೇಣಿಯಲ್ಲಿದ್ದ ಕೋಟೆಯು ಈಗ ಅವಶೇಷ. ಕೋಟೆಯ ಅಳಿದುಳಿದ ಭಾಗಗಳನ್ನು ಚೆನ್ನಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಪ್ರವಾಸಿಗಳಿಗೆ ವೀಕ್ಷಣೆಗೆ ಯೋಗ್ಯವಾಗಿದೆ. ಹಿಮಾಲಯದ ಪರ್ವತ...
1937ರಲ್ಲಿ ನಡೆದ ಅಖಿಲ ಭಾರತ ಗಾಂಧಿ ಸೇವಾ ಸಂಘದ ವಾರ್ಷಿಕ ಸಭೆ ನಡೆದಿರುವುದಕ್ಕೆ ಬೃಂದಾವನ ಸಾಕ್ಷಿಯಾಗಿದೆ. ಈ ಸಭೆಯಲ್ಲಿ ಮಹಾತ್ಮ ಗಾಂಧಿ, ಡಾ. ರಾಜೇಂದ್ರ ಪ್ರಸಾದ್ ಮತ್ತು ಶ್ರೀ ಜೆ.ಬಿ. ಕೃಪಲಾನಿ ಅವರು ಭಾಗವಹಿಸಿದ್ದರು. ಗಾಂಧೀಜಿ ಅವರು ಅಂದು ಸ್ಥಾಪಿಸಿದಂತಹ ಪ್ರಾಥಮಿಕ ಶಾಲೆಯೊಂದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ.
ಸರೈಯಾ ಮನ್ ಸರೋವರು ಪಶ್ಚಿಮ ಚಂಪಾರಣ್ ನ ನೈಸರ್ಗಿಕ ಪ್ರವಾಸಿ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದು ಬೆಟ್ಟೈಹ ನಗರದಿಂದ 6 ಕಿ.ಮೀ. ದೂರದಲ್ಲಿದೆ. ಸರೈಯಾ ಮ್ಯಾನ್ ಗೆ ವಿವಿಧ ರೀತಿಯ ಪಕ್ಷಿಗಳು ವಲಸೆ ಬರುತ್ತದೆ ಮತ್ತು ಇಲ್ಲಿಗೆ ಭೇಟಿ ನೀಡುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಮನೋರಂಜನೆಯಾಗಲಿದೆ.
ಭಿತಿಹರಾವ ಆಶ್ರಮವು ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಸಂಗ್ರಾಮ `ಚಂಪಾರಣ್ ಸತ್ಯಾಗ್ರಹ'ವನ್ನು ಇಲ್ಲಿಂದಲೇ ಆರಂಭಿಸಿದ್ದರು.
ನಂದನಗಡ್ ಲೌರಿಯಾ ಬ್ಲಾಕ್ ನಲ್ಲಿದ್ದರೆ, ಚಂಕಿಗಡ್ ನರ್ಕಟಿಗಂಜ್ ಬ್ಲಾಕ್ ನಲ್ಲಿದೆ. ನಂದಾ ಸಾಮ್ರಾಜ್ಯ ಮತ್ತು ಪ್ರಸಿದ್ಧ ಆರ್ಥಿಕತಜ್ಞರಾಗಿದ್ದ ಚಾಣಕ್ಯರ ಅರಮನೆಗಳ ಅವಶೇಷಗಳಿರುವ ಎರಡು ಬೃಹತ್ ದಿಬ್ಬಗಳು ಈ ಪ್ರದೇಶದ ಪ್ರಮುಖ ಆಕರ್ಷಣೆ.