ವೃಂದಾವನದಲ್ಲಿರುವ ಕಾಲಿ ಘಾಟ್ನಲ್ಲಿರುವ ಮದನ್ ಮೋಹನ್ ದೇವಾಲಯವು ಈ ಪ್ರಾಂತ್ಯದಲ್ಲಿರುವ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಹಿಂದೆ ಈ ದೇವಾಲಯವು ಇದ್ದ ಪ್ರದೇಶ ದಟ್ಟ ಕಾಡಾಗಿತ್ತು.
ಈ ದೇವಾಲಯದಲ್ಲಿರುವ ಮೂಲ ವಿಗ್ರಹವಾದ ಮದನ ಗೋಪಾಲಸ್ವಾಮಿ ವಿಗ್ರಹ ಇಲ್ಲಿಲ್ಲ. ಮೊಘಲರ ದೊರೆ ಔರಂಗಜೇಬನ ಆಳ್ವಿಕೆಯಲ್ಲಿ ಇದು ನಾಶಗೊಳ್ಳುವುದನ್ನು ತಡೆಯಲು ರಾಜಸ್ಥಾನಕ್ಕೆ ಕೊಂಡೊಯ್ಯಲಾಯಿತು. ಮೊಘಲರ ಆಳ್ವಿಕೆಯ ಕಾಲದಲ್ಲಿ ಹಲವಾರು ಹಿಂದೂ ದೇವಾಲಯಗಳು ನಾಶಗೊಂಡವು. ಇಂದು ಅದೇ ವಿಗ್ರಹದ ಮಾದರಿಯನ್ನು ಇಲ್ಲಿ ಪೂಜಿಸಲಾಗುತ್ತಿದೆ. ಮೂಲ ವಿಗ್ರಹವು ರಾಜಸ್ಥಾನ್ನಲ್ಲಿರುವ ಕರೌಲಿಯಲ್ಲಿ ಇಂದಿಗು ಸುರಕ್ಷಿತವಾಗಿದೆ.
ಇಂದು ನಾವು ನೋಡುವ ದೇವಾಲಯವು ಪ್ರಾಚೀನ ದೇವಾಲಯಕ್ಕಿಂತ ಕಿರಿದಾಗಿದೆ ಆದರೆ ಸುಂದರವಾದ ಕೆತ್ತನೆಗಳಿಂದ ಅಲಂಕಾರಗೊಂಡಿದೆ. ಎತ್ತರವಾಗಿ, ಸಮಾನಂತರವಾಗಿರುವ ಕೆಂಪು ಬಣ್ಣದ ಈ ದೇವಾಲಯವನ್ನು 19ನೇ ಶತಮಾನದಲ್ಲಿ ಶ್ರೀ ನಂದಾಲಾಲ್ ವಸುರವರು ನಿರ್ಮಿಸಿದರು. ಮೂಲ ರಚನೆಯು ಮೊಘಲರ ದಾಳಿಯ ಅವಧಿಯಲ್ಲಿ ನಾಶಗೊಂಡಿತು.