ವಿಜಯೇಶ್ವರ ದೇವಾಲಯವು ಇಂದ್ರಕೀಲಾದ್ರಿ ಪರ್ವತದ ಮೇಲೆ ನಿರ್ಮಾಣವಾಗಿದೆ. ಈ ದೇವಾಲಯದಲ್ಲಿನ ಶಿಲ್ಪಗಳು ಭವ್ಯವಾಗಿದ್ದು ಪ್ರವಾಸಿಗರನ್ನು ಆಕರ್ಶಿಸುತ್ತದೆ. ಇದು ಅತ್ಯಂತ ಪುರಾತನವಾದ ದೇವಾಲಯವಾಗಿದ್ದು ಮಹಾಭಾರತದಲ್ಲಿಯೂ ಈ ದೇವಾಲಯದ ಬಗ್ಗೆ ಪ್ರಸ್ತಾಪಿಸಲಾಗಿದೆ.
ಪಾಂಡವರ ರಾಜ ಅರ್ಜುನ ತನ್ನ ವಿಜಯದ ನೆನಪಿಗಾಗಿ, ಬೇಟೆಗಾರನ ರೂಪದಲ್ಲಿ ಬಂದ ಶಿವನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದ ಎಂಬ ದಂತ ಕಥೆಗಳೂ ಕೂಡಾ ಈ ದೇವಾಲಯದ ಬಗ್ಗೆ ಹೇಳಲಾಗುತ್ತದೆ. ಹಲವಾರು ದಂತಕಥೆಗಳನ್ನು ಈ ದೇವಾಲಯದ ಗೋಡೆಗಳ ಮೇಲೆ ಕೆತ್ತಲಾಗಿದ್ದು ಆಗಿನ ಕುಶಲಕರ್ಮಿಗಳ ಸಾಮರ್ಥ್ಯವನ್ನು ತೋರಿಸುತ್ತದೆ. ಇಲ್ಲಿನ ವಾಸ್ತುಶಿಲ್ಪ ಕೆತ್ತನೆಗಳು ಅದ್ಭುತವಾಗಿದ್ದು ನೋಡಲೇ ಬೇಕಾದ ಸ್ಥಳವಾಗಿದೆ.