ಕನಕ ದುರ್ಗ ದೇವಸ್ಥಾನವನ್ನು ಇಂದ್ರಕೀಲಾದ್ರಿ ಬೆಟ್ಟದ ಮೇಲೆ ಕಾಣಬಹುದು. ಈ ಬೆಟ್ಟದ ಮೂಲಕ ಕೃಷ್ಣಾ ನದಿಯು ಪ್ರವಹಿಸುತ್ತದೆ. ವಿಜಯವಾಡದ ಗ್ರಾಮ ದೇವತೆ ಎಂದು ಪೂಜಿಸಲ್ಪಡುವ ಕನಕ ದುರ್ಗ ದೇವತೆಯೆ ಈ ದೇವಾಲಯದ ಆರಾಧನಾ ದೇವತೆ. ಪುರಾಣದ ಪ್ರಕಾರ ಮಹಾಭಾರತದ ಅರ್ಜುನ, ದುರ್ಗಾ ದೇವಿಯ ಹೆಸರಿನಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಿದ ನಂತರ ಪ್ರಬಲವಾದ ಪಾಶುಪಥಾಸ್ತ್ರವನ್ನು ಪಡೆದ ಎಂದು ಹೇಳಲಾಗುತ್ತದೆ. ಇನ್ನೊಂದು ಹೇಳಿಕೆಯ ಪ್ರಕಾರ, 12 ನೇ ಶತಮಾನದಲ್ಲಿ ಆಧುನಿಕ ವಿಜಯವಾಡ ಸಾಮ್ರಾಜ್ಯ ನಿರ್ಮಾಣಕರ್ತನಾದ ರಾಜ ಪೂಶಪತಿ ಮಾಧವ ವರ್ಮಾನಿಂದ ಈ ದೇವಾಲಯವನ್ನು ಕಟ್ಟಲಾಗಿದೆ ಎನ್ನುವ ಕಥೆಯೂ ಸಹ ಚಾಲ್ತಿಯಲ್ಲಿದೆ.
ಪವಿತ್ರ ವೇದ ಪುಸ್ತಕಗಳ ಪ್ರಕಾರ ಈ ದೇವಾಲಯವು ಸ್ವಯಂ ಸೃಷ್ಟಿ ಅಥವಾ ’ಸ್ವಯಂಭು’ ದೇವಾಲಯ. ಆದ್ದರಿಂದ ಇದು ಅತ್ಯಂತ ಶಕ್ತಿಶಾಲಿ ದೇವಾಲಯ ಎಂದು ಹೇಳಲಾಗಿದೆ. ಈ ದೇವಾಲಯದಲ್ಲಿ ಪ್ರಮುಖವಾದ ಹಬ್ಬಗಳನ್ನು ಆಚರಿಸಲಾಗುತ್ತಿದ್ದು ಅವುಗಳಲ್ಲಿ ಸರಸ್ವತಿ ಪೂಜೆ ಹಾಗೂ ತೆಪ್ಪೋತ್ಸವ ಅತ್ಯಂತ ಪ್ರಸಿದ್ಧವಾದವು. ಈ ಕನಕ ದುರ್ಗ ದೇವಸ್ಥಾನಕ್ಕೆ ಅತ್ಯಂತ ಹತ್ತಿರದಲ್ಲಿ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಿದ್ದು ಇಲ್ಲಿಗೆ ಪ್ರವಾಸಕ್ಕಾಗಿ ಸುಲಭವಾಗಿ ಭೇಟಿ ನೀಡಬಹುದು.