ಅಕ್ಕಣ್ಣ ಹಾಗೂ ಮಾದಣ್ಣ ಗುಹೆಗಳು, 17 ನೇ ಶತಮಾನದಲ್ಲಿ ಅಬ್ದುಲ್ ಹಾಸನ್ ತಾನ್ ಷಾ ಆಳ್ವಿಕೆಯ ಕಾಲದಲ್ಲಿ ಅವರ ಆಸ್ಥಾನದಲ್ಲಿದ್ದ ಅಕ್ಕಣ್ಣ ಹಾಗೂ ಮಾದಣ್ಣ ಎಂಬ ಮಂತ್ರಿಗಳ ಹೆಸರಿನಲ್ಲಿ ಎರಡು ಕತ್ತರಿಸಿದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಈ ಗುಹೆಗಳಲ್ಲಿ ಇಬ್ಬರೂ ಮಂತ್ರಿಗಳ ಚಿತ್ರಗಳ ಕೆತ್ತನೆಗಳನ್ನು ಮಾಡಲಾಗಿದೆ. ಈ ಗುಹೆಗಳು 6 ಹಾಗೂ 7 ಶತಮಾನದಿಂದಲೇ ಅಸ್ತಿತ್ವದಲ್ಲಿತ್ತು ಎಂದೂ ಹೇಳಲಾಗುತ್ತದೆ. ಪ್ರಸಿದ್ಧ ಕನಕ ದುರ್ಗ ದೇವಾಲಯ ಇರುವ ಪರ್ವತದಲ್ಲಿಯೇ ಈ ಗುಹೆಗಳೂ ಕಂಡುಬರುವುದರಿಂದ ದೇವಾಲಯಕ್ಕೆ ಹೋಗುವಾಗ ದಾರಿ ಮಧ್ಯ ಈ ಅಪರೂಪದ ಗುಹೆಗಳಿಗೆ ಭೇಟಿ ನೀಡಬಹುದು. ಈ ಗುಹೆ ಹಾಗೂ ದೇವಾಲಯವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಈ ಗುಹೆಗಳ ಮೇಲ್ಭಾಗದಲ್ಲಿ ಹಿಂದೂ ಧರ್ಮದಲ್ಲಿ ತ್ರಿಮೂರ್ತಿಗಳು ಎಂದು ಕರೆಯಲ್ಪಡುವ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರನ್ನು ಕಲ್ಲಿನಲ್ಲಿ ಕೆತ್ತಲಾದ ದೇವಾಲಯವಿದೆ. ಇದು ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.