ವೇಣೂರು ಜೈನ ಸಮುದಾಯದ ಒಂದು ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಗುರಪುರ ನದಿ ದಂಡೆಯ ಮೇಲಿರುವ ಈ ಚಿಕ್ಕ ಪಟ್ಟಣವು ಈ ದಿನಗಳಲ್ಲಿ ಅಷ್ಟೊಂದು ಸುದ್ದಿಯಲ್ಲಿ ಇಲ್ಲದೆ ಹೊದರೂ ಇತಿಹಾಸದ ಪ್ರಕಾರ ಇದೊಂದು ಪ್ರಗತಿಪರ ನಗರವಾಗಿದ್ದು ಅಜಿಲ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿತ್ತು.
ಜೈನ ಸಮುದಾಯದ ಜನಪ್ರಿಯವಾದ ಹೆಗ್ಗುರುತು
ಆದುದರಿಂದ ಇದು ಧಾರ್ಮಿಕ ಹಾಗು ಐತಿಹಾಸಿಕ ಮಹತ್ವವನ್ನು ಪಡೆದಿದೆ. ಈ ಪಟ್ಟಣದ ಪ್ರಮುಖ ಆಕರ್ಷಣೆ ಎಂದರೆ 35 ಅಡಿ ಎತ್ತರದ ಭಗವಾನ್ ಗೊಮ್ಮಟೇಶ್ವರನ ಪ್ರತಿಮೆ. ಈ ಪ್ರತಿಮೆಯನ್ನು 1604 ರಲ್ಲಿ ಜೈನ ರಾಜನಾದ ತಿಮ್ಮಣ್ಣ ಅಜಿಲನು ಪ್ರತಿಷ್ಠಾಪಿಸಿದ್ದು, ಇಡಿ ಕರ್ನಾಟಕದಲ್ಲಿ ಕಾಣಸಿಗುವ ನಾಲ್ಕು ಗೊಮ್ಮಟೇಶ್ವರನ ಏಕಶಿಲಾ ಪ್ರತಿಮೆಗಳಲ್ಲಿ ಇದು ಒಂದಾಗಿದೆ.
ಅನ್ವೇಷಿಸಲು ಅಥವಾ ವೀಕ್ಷಿಸಲು ಯೋಗ್ಯವಾಗಿರುವ ಇನ್ನು ಹಲವಾರು ಜೈನ ಬಸದಿಗಳನ್ನು ವೇಣೂರಿನಲ್ಲಿ ಕಾಣಬಹುದು.ಇಷ್ಟೆ ಅಲ್ಲದೆ ಪುರಾತನ ಕಾಲದ 7 ದೇವಸ್ಥಾನಗಳನ್ನು ಇಲ್ಲಿ ನೋಡಬಹುದಾಗಿದ್ದು ಆ ಕಾಲದ ವಾಸ್ತು ಶಿಲ್ಪ ಕಲೆಯ ವೈಭವವನ್ನು ಆಸ್ವಾದಿಸಬಹುದು. ಇದರಲ್ಲಿ ಎರಡು ದೇವಸ್ಥಾನಗಳು ಗೊಮ್ಮಟೇಶ್ವರನ ಎರಡು ಬದಿಯಲ್ಲಿವೆ. ಇನ್ನು ಪ್ರಾಕೃತಿಕವಾಗಿ ವೇಣೂರು ತನ್ನ ಸುತ್ತ ಸಹ್ಯಾದ್ರಿ ಬೆಟ್ಟದ ಶ್ರೇಣಿಯನ್ನು ಹೊಂದಿದ್ದು ನೋಡಲು ನಯನಮನೋಹರವಾಗಿದೆ. ಜೈನ ಸಮುದಾಯದ ಪ್ರಮುಖ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕಾರ್ಕಳಕ್ಕೆ ವೇಣೂರು ಹತ್ತಿರದಲ್ಲಿದೆ.
ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದು, ಮಂಗಳೂರು, ಉಡುಪಿ ಹಾಗು ರಾಜ್ಯದ ಇತರೆ ಸಾರಿಗೆ ಬಸ್ಸುಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.