ಮೆಟ್ಟುಕುಲಂ ಕಟಪಾಡಿ ತಾಲೂಕಿನ ಒಂದು ಸಣ್ಣ ಗ್ರಾಮವಾಗಿದೆ. ಮುತ್ತುಮರುಯಮ್ಮನ್ ದೇವಾಲಯಕ್ಕಾಗಿ ಇದು ಪ್ರಸಿದ್ಧವಾಗಿದೆ. ಮಹಾಮುತ್ತುಮರಿಯಮ್ಮನ್ ನ ಅವತಾರ ಈ ದೇವತೆಯಾಗಿದ್ದಾಳೆ ಹಾಗೂ ಈ ದೇವಾಲಯದಲ್ಲಿ ನೆಲೆಸಿದ್ದಾಳೆ. ಇಲ್ಲಿನ ದೇವಿಯನ್ನು ಒಂದು ಸಾರಿ ನೋಡಿದರೆ ಎಲ್ಲಾ ಪಾಪಗಳೂ ಪರಿಹಾರವಾಗುತ್ತವೆ ಎಂದು ನಂಬಲಾಗುತ್ತದೆ.
ಮುತ್ತುಮರಿಯಮ್ಮನ್ ದೇವಾಲಯದ ಆವರಣದಲ್ಲಿ ಮಹಾಗಣಪತಿ, ಬಾಲಮುರುಗನ್, ನವಗ್ರಹ ದೇವಾಯಲಗಳೂ ಇವೆ. ಇಲ್ಲಿನ ಶಾಂತ ಅನುಭೂತಿ ಮನಸ್ಸಿಗೆ ಆಹ್ಲಾದಕರ ವಾತಾವರಣವನ್ನು ನೀಡುತ್ತದೆ. ಆಂಜನೇಯರ್ ದೇವಾಲಯ ಮೆಟ್ಟುಕುಲಂ ನ ಹಳೆಯ ಬಸ್ ನಿಲ್ದಾಣದಿಂದ ಕೇವಲ 12 ಕಿ.ಮೀ ದೂರದಲ್ಲಿದೆ ಹಾಗೂ ವೆಲ್ಲೂರಿನಿಂದ 7 ಕಿ.ಮೀ ದೂರದಲ್ಲಿದ್ದು ಚಿತ್ತೂರು ಮತ್ತು ವೆಲ್ಲೂರು ಹೆದ್ದಾರಿಯಲ್ಲಿದೆ. ಇಲ್ಲಿಗೆ ಭೇಟಿ ನೀಡುವುದು ನಿಮ್ಮಲ್ಲೆ ಒಂದು ಹೊಸ ಶಕ್ತಿಯ ಸಂಚಲನ ಮೂಡಿಸದೇ ಇರದು.