ಉನಾ ಜಿಲ್ಲೆಯ ಅಮಲೇರ್ ಎಂಬ ಹಳ್ಳಿಯಲ್ಲಿದೆ ಈ ಬಾಬಾ ರುದ್ರಾನಂದ ಆಶ್ರಮ. ಪ್ರಮುಖ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಹೊಂದಿದೆ. ಈ ಆಶ್ರಮದಲ್ಲಿ ವಾರ್ಷಿಕ ಉತ್ಸವಗಳು ಅದ್ಧೂರಿಯಾಗಿ ನಡೆಯುತ್ತದೆ. ಇದರಿಂದಲೇ ಆಶ್ರಮವು ಹೆಸರುವಾಸಿಯಾಗಿದೆ ಕೂಡ. ಕುಶೋತ್ತಪಠಿಣಿ ಅಮಾವಾಸ್ಯೆ ದಿನ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ, ಮಕರ ಸಂಕ್ರಾಂತಿ, ಶಿವರಾತ್ರಿ ಸಂದರ್ಭದಲ್ಲಿ ಇಲ್ಲಿ ಉತ್ಸವಗಳು ನಡೆಯುತ್ತವೆ.
ಉತ್ಸವಗಳ ರೂಪದಲ್ಲಿ ನಡೆಯುವ ಜಾತ್ರೆಯಲ್ಲಿ ನೀರಜಾಲಾ ಏಕಾದಶಿ ಜಾತ್ರೆ, ಪಂಚ ಭೀಷ್ಮ ಜಾತ್ರೆ, ವ್ಯಾಸ ಪೂಜೆ, ಬಾಬಾ ರುದ್ರಾ ಜಯಂತಿ ಆಚರಣೆಗಳು ಅತ್ಯಂತ ಶೃದ್ಧಾ, ಭಕ್ತಿಯಿಂದ ಆಚರಿಸಲ್ಪಡುತ್ತವೆ. ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಕ್ತರಿಗೆ ವಿರಮಿಸಲು, ತಂಗಲು ಅಗತ್ಯ ವಸತಿ ಸೌಲಭ್ಯವೂ ಇಲ್ಲಿದೆ. ಅಲ್ಲದೇ ಇಲ್ಲಿ ಅಖಾನಂದ ಧೂನ ಎಂಬ ದೈವಿ ಶಕ್ತಿ ಇದೆ ಎಂದು ನಂಬಲಾಗುತ್ತದೆ. 1850 ರಿಂದ ಈ ಭಾವನೆ ಇದ್ದು, ಈ ಕಾರಣಕ್ಕೂ ಇದು ಆಕರ್ಷಣೆಯ ತಾಣವಾಗಿ ಜನಪ್ರಿಯವಾಗಿದೆ.