ಅನಂತೇಶ್ವರ ದೇಗುಲವು ಉಡುಪಿಯ ಸಮೀಪದಲ್ಲಿದೆ. ಇದು ಕೇರಳದಲ್ಲಿದ್ದರೂ ಕೂಡಾ ಕರ್ನಾಟಕದ ಭಕ್ತರು ಇಲ್ಲಿಗೆ ಬರುತ್ತಾರೆ. ಮಂಜುಳಾ ದೇವಸ್ಥಾನ ಎಂದು ಕೂಡಾ ಇದು ಪ್ರಸಿದ್ಧವಾಗಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಈ ದೇವಸ್ಥಾನ ಇದೆ. ದಕ್ಷಿಣ ಭಾರತದಲ್ಲೇ ಇದು ತುಂಬಾ ಪುರಾತನವಾದ ದೇಗುಲ. ಸುಮಾರು ೧೦೦ಕ್ಕೂ ಹೆಚ್ಚು ವರ್ಷಗಳಷ್ಟು ಹಿಂದಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ದೇಗುಲದ ಮೂರೂ ಕಡೆ ಗುಡ್ಡಗಳಿಂದ ಆವೃತವಾಗಿದ್ದು, ಇನ್ನೊಂದು ಕಡೆ ಮಂಜೇಶ್ವರ ನದಿಯು ಹರಿಯುತ್ತದೆ.ಇಲ್ಲಿ ಮೂರು ದೇವರುಗಳು ಇದ್ದು, ಶ್ರೀ ಅನಂತ, ಶ್ರೀ ಈಶ್ವರ (ಶಿವ) ಮತ್ತು ಭದ್ರ ನರಸಿಂಹನ (ವಿಷ್ಣುವಿನ ಅವತಾರ) ಮೂರ್ತಿಗಳು ಇವೆ. ೧೨ನೇ ಶತಮಾಣದವರೆಗೂ ವಿಷ್ಣುವಿನ ಭಕ್ತರಿಗೆ ಈ ದೇವಸ್ಥಾನವು ಪ್ರಮುಖ ತೀರ್ಥಕ್ಷೇತ್ರವಾಗಿತ್ತು.ದೇವಸ್ಥಾನವು ಉಡುಪಿಯ ಸಮೀಪದಲ್ಲಿದೆ. ಮಂಜೇಶ್ವರ ರೈಲ್ವೇ ಸ್ಟೇಷನ್ನಿಂದ ಸುಮಾರು ೧.೫ ಕಿ.ಮೀ ದೂರದಲ್ಲಿ ಇದೆ. ಉಡುಪಿ ಮತ್ತು ಮಂಜೇಶ್ವರದಿಂದ ಬಸ್ ಸೌಲಭ್ಯ ಕೂಡಾ ಇದೆ. ಮಂಜೇಶ್ವರ ಮತ್ತು ಉಡುಪಿಯಲ್ಲಿ ವಸತಿ ಸೌಲಭ್ಯವನ್ನು ಹೊಂದಬಹುದು.